ಮಂಗಳೂರು, ಮಾ.25 (DaijiworldNews/PY): ವಿಶ್ವಬ್ರಾಹ್ಮಣ ಮಹಿಳಾ ಸಮಿತಿಯ ನೂತನ ಅಧ್ಯಕ್ಷೆಯಾಗಿ ಜಯಂತಿ ಕೆ. ಆಚಾರ್ಯ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಇಲ್ಲಿನ ವಿಶ್ವ ಬ್ರಾಹ್ಮಣ ಮಹಿಳಾ ಸಮಿತಿಯ ಇದರ ಮಹಾಸಭೆ ಇತ್ತೀಚಿಗೆ ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪ ಆಚಾರ್ಯ ಕಲ್ಯಾಣ ಮಂಟಪದಲ್ಲಿ ಮಹಿಳಾ ಸಮಿತಿಯ ಅಧ್ಯಕ್ಷೆ ವನಿತಾ ಉಪೇಂದ್ರ ಆಚಾರ್ಯರ ಅಧ್ಯಕ್ಷತೆಯಲ್ಲಿ ಜರಗಿತು.
ಮುಖ್ಯ ಅತಿಥಿ ಯಾಗಿ ನಗರದ ಶಾರದಾ ಪಿ ಯು ಕಾಲೇಜಿನ ಆಂಗ್ಲ ಉಪನ್ಯಾಸಕಿಯಾದ ರಶ್ಮಿ ದಿನೇಶ್ ಮಾತನಾಡುತ್ತ, "ಮಹಿಳೆಯರು ಸಾಮಾಜಿಕ ಧಾರ್ಮಿಕ ರಾಜಕೀಯ ಶೈಕ್ಷಣಿಕ ಕ್ಷೇತ್ರದಲ್ಲಿ ಪುರುಷರಂತೆ ಸಮವಾಗಿ ಸೇವೆ ಸಲ್ಲಿಸುವಂತಾಗಬೇಕು. ಈ ನಿಟ್ಟಿನಲ್ಲಿ ವಿಶ್ವ ಬ್ರಾಹ್ಮಣ ಮಹಿಳಾ ಸೇವಾ ಸಮಿತಿಯ ಸಮಾಜ ಸೇವೆ ನಿಜಕ್ಕೂ ಅರ್ಥಪೂರ್ಣ" ಎಂದು ಶ್ಲಾಘಿಸಿದರು.
ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಆಗಮಿಸಿ ಮಹಿಳಾ ಸಮಿತಿಯ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿ ಕ್ಷೇತ್ರದ ಜೀರ್ಣೋದ್ದಾರ ಕಾರ್ಯಗಳಿಗೆ ಮಹಿಳಾ ಸಮಿತಿಯ ಸಹಕಾರ ಕೋರಿದರು.
ಮಹಿಳಾ ಸಮಿತಿಯ ಗೌರವಧ್ಯಕ್ಷೆ ಶಕುಂತಳಾ ಬಿ. ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾರ್ಷಿಕ ವರದಿಯನ್ನು ಕಾರ್ಯದರ್ಶಿ ವಿಶ್ವಕಲಾ ವಿಶ್ವಜ್ಞ ಮೂರ್ತಿ ವಾಚಿಸಿದರು. ಕೋಶಾಧಿಕಾರಿ ರೇಖಾ ರಾಜಶೇಖರ್ ಲೆಕ್ಕ ಪತ್ರ ವಾಚಿಸಿದರು. ಪ್ರಫುಲ್ಲ ನಾಗರಾಜ್ ವಂದಿಸಿದರು.
ಮುಂದಿನ 5 ವರ್ಷದ ಅವಧಿಗೆ ಜಯಂತಿ ಕೇಶವ ಆಚಾರ್ಯ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಮಂಜುಳಾ ಪಾಂಡುರಂಗ, ಕೋಶಾಧಿಕಾರಿಯಾಗಿ ವನಿತಾ ಉಪೇಂದ್ರ ಆಚಾರ್ಯ ಸರ್ವಾನುಮತದಿಂದ ಆಯ್ಕೆಗೊಂಡರು. ಈ ಪ್ರಕ್ರಿಯೆಯನ್ನು ಜಯಶ್ರೀ ರಾಜೇಶ್ ನಿರ್ವಹಿಸಿ ಕೊಟ್ಟರು. ಬೆಸೆಂಟ್ ಮಹಿಳಾ ಕಾಲೇಜಿನ ಉಪನ್ಯಾಸಕಿ ಅರುಣಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಸಮಿತಿಯ ಮಹಿಳೆಯರು ಭಾಗವಹಿಸಿದ್ದರು.