ಮಂಗಳೂರು,ಮಾ 25 (DaijiworldNews/MS): ಪತಿಯನ್ನು ಬಲವಂತವಾಗಿ ಅಪಹರಿಸಿ ಅನ್ಯಕೋಮಿನ ಯುವತಿ ಜತೆ ವಿವಾಹ ಮಾಡಲಾಗಿದೆ ಎಂದು ನಗರದ (ದಕ್ಷಿಣ) ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ದಾಖಲಿಸಿ ಬಳಿಕ ಈ ಪ್ರಕರಣ ಹೊಸ ಇದೀಗ ಹೊಸ ತಿರುವು ಪಡೆದಿದೆ.
ಪತಿ ಬಿ.ಎಸ್. ಗಂಗಾಧರ್ ಅವರಿಗೆ 62 ವರ್ಷಗಳಾಗಿದ್ದು ಜನವರಿಯ ಕೊನೆಯ ವಾರದಿಂದ ಮನೆಗೆ ಬಂದಿರಲಿಲ್ಲ. ಫೆಬ್ರವರಿ ಎಂಟರಂದು ಕರೆ ಸ್ವೀಕರಿಸಿ ಮಾತನಾಡಿದ್ದರು. ಅನಂತರ ಕರೆ ಸ್ವೀಕರಿಸಲಿಲ್ಲ. ಪತಿಯನ್ನು ಅಪಹರಿಸಿ ಮುಸ್ಲಿಂ ಯುವತಿಯೊಂದಿಗೆ ಬಲವಂತವಾಗಿ ವಿವಾಹ ಮಾಡಲಾಗಿದೆ ಎಂದು ಗಂಗಾಧರ್ ಪತ್ನಿ ದೂರು ದಾಖಲಿಸಿದ್ದರು.
ಆದರೆ ಇದೀಗ ಗಂಗಾಧರ್ ಅವರೊಂದಿಗೆ ವಿವಾಹವಾಗಿದ್ದಾರೆ ಎನ್ನಲಾದ ಮುಸ್ಲಿಂ ಮಹಿಳೆಯೂ , ಬಿ.ಎಸ್. ಗಂಗಾಧರ್ ವಿರುದ್ದ ದೂರು ದಾಖಲಿಸಲಿದ್ದಾಳೆ. "ವಿವಾಹವಾದ ಬಳಿಕ ಆತ ಸಮುದಾಯದವನಲ್ಲ ಎಂದು ತಿಳಿದುಬಂದು ಆತನಿಂದ ದೂರವಿದ್ದಾಗ, ಆತ ದೈಹಿಕ ಹಲ್ಲೆ , ಲೈಂಗಿಕ ದೌರ್ಜನ್ಯ ನಡೆಸಿ, ಗರ್ಭಪಾತ ಮಾಡಿಸಿದ್ದಾರೆ ಎಂದು ದೂರು ನೀಡಿದ್ದಾರೆ.
ತನಿಖೆ ವೇಳೆ ಕೇರಳ ಮೂಲದ ಸೈಯದ್ , ಶಬ್ಬೀರ್, ಮತ್ತು ಅಹ್ಮಮದ್ ಎಂಬವರು ಮುಸ್ಲಿಂ ಮಹಿಳೆಗೆ ವಂಚಿಸುವ ಉದ್ದೇಶದಿಂದ ಗಂಗಾಧರ್ ನನ್ನು ಒಂದೇ ಸಮುದಾಯದ ಅಬ್ದುಲ್ ಅನೀಸ್ ಎಂದು ನಂಬಿಸಿ ವಿವಾಹ ಮಾಡಿಸಿದ್ದರು ಎಂದು ತಿಳಿದುಬಂದಿದೆ. ಇನ್ನು ಬಿ.ಎಸ್. ಗಂಗಾಧರ್ ಅಲಿಯಾಸ್ ಅಬ್ದುಲ್ ಅನೀಸ್ ಈಗಾಗಲೇ ಎರಡು ಮದುವೆಯಾಗಿದ್ದು ಮಹಿಳೆಯರಿಗೆ ವಂಚಿಸುವ ಪ್ರವೃತ್ತಿಯುಳ್ಳವನು ಎಂದು ತನಿಖೆಯಿಂದ ತಿಳಿದುಬಂದಿದ್ದು, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 323, 406, 417, 420, 313, 376, 34 ರ ಅಡಿಯಲ್ಲಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರು: 62ರ ಪತಿಯನ್ನು ಕಿಡ್ನಾಪ್ ಮಾಡಿ ಮುಸ್ಲಿಂ ಯುವತಿಯೊಂದಿಗೆ ವಿವಾಹ - ಮಹಿಳೆ ದೂರು