ಕಾಸರಗೋಡು, ಮಾ. 24 (DaijiworldNews/SM): ಸೇತುವೆಯಿಂದ ನದಿಗೆ ಹರಿದ 25ರ ಹರೆಯದ ಯುವತಿಯನ್ನು ಸಾರ್ವಜನಿಕರು ರಕ್ಷಣೆ ಮಾಡಿರುವ ಘಟನೆ ಕಾಸರಗೋಡಿನ ತೆಕ್ಕಿಲ್ ನಲ್ಲಿ ನಡೆದಿದೆ.
ತೆಕ್ಕಿಲ್ ಸೇತುವೆಯಿಂದ ಚಂದ್ರಗಿರಿ ಹೊಳೆಗೆ ಯುವತಿ ಹಾರಿದ್ದಳು. ಸ್ಥಳೀಯ ಯುವಕರಿಂದ ಸಾಹಸಿಕ ರೀತಿಯಲ್ಲಿ ರಕ್ಷಣೆ ಮಾಡಲಾಗಿದೆ. ಉದುಮ ಪರಿಸರದ ಯುವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈಕೆ ಕ್ಲಿನಿಕ್ ವೊಂದರಲ್ಲಿ ಕೆಲಸಕ್ಕಿದ್ದಳು.
ವಾಹನವೊಂದರಲ್ಲಿ ತೆರಳುತ್ತಿದ್ದ ಯುವಕರು ಯುವತಿಯನ್ನು ಹಾರುವುದನ್ನು ಗಮನಿಸಿ ನದಿಗೆ ಹಾರಿ ರಕ್ಷಣೆ ಮಾಡಿದ್ದಾರೆ. ಸಾದಿಕ್, ಸಾದತ್ ಎಂಬ ಯುವಕರ ಸಾಹಸ ಮೆರೆದಿದ್ದರು.