ಕಾಸರಗೋಡು,ಮಾ 24 (DaijiworldNews/MS): ಅಡ್ಡ ಬಂದ ಬೆಕ್ಕನ್ನು ತಪ್ಪಿಸಲೆತ್ನಿಸಿದಾಗ ಬೈಕ್ ಮಗುಚಿ ಬಿದ್ದು , ರಸ್ತೆಗೆ ಬಿದ್ದ ಸವಾರನ ದೇಹದ ಮೇಲೆ ಕಾರು ಹರಿದು ಮೃತಪಟ್ಟ ಘಟನೆ ಕಾ ಞ೦ ಗಾಡ್ ನ ಅಲಾಮಿಪಳ್ಳಿ ಯಲ್ಲಿ ಮಾ.24ರ ಬುಧವಾರ ನಡೆದಿದೆ. ಸಹ ಸವಾರ ಗಾಯಗೊಂಡಿದ್ದಾನೆ .
ನೀಲೇಶ್ವರ ಅಂಬಲತ್ತರ ದ ಜಿಷ್ಣು (24) ಮೃತಪಟ್ಟ ಸವಾರ . ಸಹ ಸವಾರ ರಂಜಿತ್ ಗಾಯ ಗೊಂಡಿದ್ದು , ಆಸ್ಪತ್ರೆಗೆ ದಾಖಲಿಸಲಾಗಿದೆ . ಗಂಭೀರ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಜಿಷ್ಣು ಮೃತಪಟ್ಟರು. ಕಾರು ನಿಲ್ಲಿಸದೆ ಪರಾರಿಯಾಗಿದ್ದು , ನೀಲೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ