ಮಂಗಳೂರು, ಮಾ 24 (DaijiworldNews/MS): ಉತ್ತಮ ಸೇವೆ ಹಿನ್ನೆಲೆಯಲ್ಲಿ 2020 ನೇ ಸಾಲಿನ ಮುಖ್ಯಮಂತ್ರಿಯವರ ಪದಕಕ್ಕೆ ದಕ್ಷಿಣ ಕನ್ನಡ ಜಿಲ್ಲೆಯವರು ಮತ್ತು ಉಡುಪಿ ಜಿಲ್ಲೆಯ ಮೂವರು ಪೊಲೀಸರು ಆಯ್ಕೆಯಾಗಿದ್ದಾರೆ.
ಪುತ್ತೂರಿನ ಪ್ರವೀಣ್ ರೈ- ಉಪ್ಪಿನಂಗಡಿ ಪೊಲೀಸ್ ಠಾಣೆ, ಬಜ್ಪೆಯ ಸಂಪತ್ ಕುಮಾರ್ ಬಿ - ಜಿಲ್ಲಾ ಪೊಲೀಸ್ ತಾಂತ್ರಿಕ ತಂಡ, ನಯನಾ- ಮಂಗಳೂರು ದಕ್ಷಿಣ ಪೊಲೀಸ್ ಠಾಣೆ, ಸುಜನ್ ಶೆಟ್ಟಿ - ಮಂಗಳೂರು ಉತ್ತರ ಪೊಲೀಸ್ ಠಾಣೆ ಮತ್ತು ಸಿಸಿಬಿ ಮಂಗಳೂರಿನ ಅಬ್ದುಲ್ ಜಬ್ಬರ್ ದ.ಕ ಜಿಲ್ಲೆಯಿಂದ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾದ ಐದು ಪೊಲೀಸರಾಗಿದ್ದಾರೆ
ಎಡದಿಂದ ಬಲಕ್ಕೆ ಮೇಲೆ (ಮೇಲೆ)- ಸುಜನ್ ಶೆಟ್ಟಿ, ಅಬ್ದುಲ್ ಜಬ್ಬರ್, ನಯಾನಾ
ಕೆಳಗೆ: ಸಂಪತ್ ಕುಮಾರ್ ಬಿ, ಪ್ರವೀಣ್ ರೈ
ಉಡುಪಿ:
2020 ರ ಪ್ರತಿಷ್ಠಿತ ಮುಖ್ಯಮಂತ್ರಿ ಪದಕಕ್ಕೆ ಉಡುಪಿಯ ಮೂವರು ಪೊಲೀಸರು ಆಯ್ಕೆಯಾಗಿದ್ದಾರೆ.
ರಾಘವೇಂದ್ರ ಎಂ ಬೈಂದೂರು-, ಬೆಂಗಳೂರಿನ ಎಸ್ಐಟಿ ಲೋಕಾಯುಕ್ತ, ರಾಮಚಂದ್ರ ನಾಯಕ್ - ಸೆನ್ ಪೊಲೀಸ್ ಠಾಣೆ , ಶಂಕರ್,ಜಿಲ್ಲಾ ಸಶಸ್ತ್ರ ಮೀಸಲು ಪಡೆ
ಶಂಕರ್, ರಾಘವೇಂದ್ರ ಎಂ ಬೈಂದೂರು, ರಾಮಚಂದ್ರ ನಾಯಕ್