ಬಂಟ್ವಾಳ, ಮಾ. 23 (DaijiworldNews/SM): ಹಳೆ ವೈಯಕ್ತಿಕ ದ್ವೇಷ ಸಾಧಿಸುವುದ್ದಕ್ಕಾಗಿ ಜ್ಯೋತಿಷ್ಯ ಶಾಸ್ತ್ರ ಕೇಳುವ ನೆಪದಲ್ಲಿ ಬಂದು ಶಾಸ್ತ್ರ ಕೇಳುತ್ತಿದ್ದ ವೇಳೆಯಲ್ಲಿ ಯೇ ತಲೆ ಮಾರಕಾಸ್ತ್ರದಿಂದ ಕಡಿದು ಪರಾರಿಯಾಗಿದ್ದ ಆರೋಪಿಯ ನ್ನು ಬಂಟ್ವಾಳ ನಗರ ಪೋಲೀಸ್ ಇನ್ಸ್ ಪೆಕ್ಟರ್ ಚೆಲುವರಾಜ್ ನೇತ್ರತ್ವದ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪಂಜಿಕಲ್ಲು ನಿವಾಸಿ ಮೋಹನ್ ಪ್ರಭು ಬಂಧಿತ ಆರೋಪಿ. ಬಿಸಿರೋಡಿನ ಪದ್ಮಾ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಜ್ಯೋತಿಷಾಲಯದಲ್ಲಿ ಪಂಡಿತ್ ಲಕ್ಮೀಕಾಂತ್ ಭಟ್ ಹೆಸರಿನಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ಮೂಲತಃ ಬಾಗಲಕೋಟೆ ನಿವಾಸಿ ಹನುಮಂತಪ್ಪ ಅವರಿಗೆ ಆರೋಪಿ ಮೋಹನ್ ಪ್ರಭು ಅವರು ಹಳೆಯ ದ್ವೇಷವನ್ನು ಸಾಧಿಸಲು ಮಾರಕಾಸ್ತ್ರಗಳಿಂದ ತಲೆಗೆ ಕಡಿದು ಪರಾರಿಯಾಗಿದ್ದರು.