ಕಾರ್ಕಳ, ಮಾ 23(DaijiworldNews/MS): ಸಂಬಳದ ಕೊಡುವ ವಿಚಾರವಾಗಿ ಗಲಾಟೆ ನಡೆದು ಕೊನೆಯಲ್ಲಿ ರಬ್ಬರ್ ತೋಟದ ಮಾಲಕ ರಬ್ಬರ್ ಟ್ಯಾಪಿಂಗ್ ಮಾಡುವ ಕತ್ತಿಯಿಂದಲೇ ಕಾರ್ಮಿಕನಿಗೆ ಇರಿದ ಘಟನೆ ಮಾರ್ಚ್ 20ರಂದು ತೆಳ್ಳಾರು ಮಾವಿನಕಟ್ಟೆ ನೀರಿನ ಟ್ಯಾಂಕ್ ಬಳಿ ನಡೆದಿದೆ.
ತೆಳ್ಳಾರಿನ ನ ರಬ್ಬರ್ ತೋಟದ ಮಾಲಕ ಶಿಜು ಅವರು ಕಾರ್ಮಿಕ ಶ್ಯಾಮ ಅವರಿಗೆ ರಬ್ಬರ್ ಟ್ಯಾಪಿಂಗ್ ಕತ್ತಿಯಿಂದ ತಿವಿದಿದ್ದಾರೆ ಎನ್ನಲಾಗಿದೆ. ಶಿಜು ಮತ್ತು ಶ್ಯಾಮ ಅವರ ನಡುವೆ ಸಂಬಳದ ವಿಚಾರವಾಗಿ ಮಾತುಕತೆ ನಡೆದಿದೆ ಮಾತಿಗೆ ಮಾತು ಬೆಳೆದು ಅವರು ಅವರಿಗೆ ಕತ್ತಿಯಿಂದ ತಿವಿದಿದ್ದಾರೆ. ಗಾಯಾಳುವನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗೆ ಉಡುಪಿಗೆ ಕರೆದೊಯ್ದು ಆನಂತರ ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಜೆಕಾರು ಪೊಲೀಸ್ ಠಾಣೆಯಲ್ಲಿ ಶಿಜೋ ವಿರುದ್ಧ ಪ್ರಕರಣ ದಾಖಲಾಗಿದೆ.