ಉಡುಪಿ, ಮಾ.22 (DaijiworldNews/MB) : ''ನಾನು ಯಾವ ತಪ್ಪು ಮಾಡಿಲ್ಲ, ಯಾವ ಸುಳ್ಳು ಹೇಳಿಲ್ಲ, ನನ್ನ ಮೇಲೆ ಸುಖ ಸುಮ್ಮನೆ ಆರೋಪ ಮಾಡಲಾಗುತ್ತಿದೆ. ಬಾರಕೂರು ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರವೀಣ್ ಆಚಾರ್ಯ ನಿಜವಾಗಿಯೂ ಅಮಾಯಕನಾಗಿದ್ದರೆ, ಬಾರಕೂರಿನ ಕಾಳಿಕಾಂಬೆ ಮತ್ತು ಅಲ್ಲಿರುವ ಕಲ್ಲುಕುಟ್ಟಿಗ ಸಾನಿಧ್ಯಕ್ಕೆ, ಕಟಪಾಡಿಯ ವಿಶ್ವನಾಥ ಕ್ಷೇತ್ರ ಹಾಗೂ ಧರ್ಮಸ್ಥಳದ ಅಣ್ಣಪ್ಪ ಕ್ಷೇತ್ರ ಕ್ಕೆ ಬಂದು ಸತ್ಯ ಪ್ರಮಾಣಕ್ಕೆ ಆಹ್ವಾನಿಸುತ್ತಿದ್ದೇನೆ. ಅಲ್ಲಿ ಬಂದು ದೇವರ ಮುಂದೆ ಪ್ರಮಾಣ ಮಾಡಲಿ, ತಪ್ಪು ನಾನು ಮಾಡಿದ್ದಾರೆ ಶಿಕ್ಷೆ ಅನುಭವಿಸಲುಅ ಸಿದ್ದನಿದ್ದೇನೆ'' ಎಂದು ಆರ್ ಟಿ ಐ ಕಾರ್ಯಕರ್ತ ಶಂಕರ್ ಶಾಂತಿ, ತನ್ನ ಮೇಲೆ ಹಲ್ಲೆ ಮಾಡಿದವರಿಗೆ ಸವಾಲೆಸೆದರು.
ಅವರು ಇಂದು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮತನಾಡಿ, "ಕಾಳಿಕಾಂಬ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತಸರ ಶ್ರೀಧರ ಆಚಾರಿ ವಡೇರಹೋಬಳಿ, ರವಿ ಆಚಾರಿ ಕೆರಾರ್ಕಳಬೆಟ್ಟು, ಚಂದಯ್ಯ ಆಚಾರಿ, ಸೌನ್ಯ ಸುರೇಶ್ ಆಚಾರಿ, ಪ್ರವೀಣ್ ಆಚಾರಿ ಮತ್ತು ಇತರರ ಮೇಲೆ ನಾನೇ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿಸಿ, ಸಭಾಭವನದ ಗಾಜು ಒಡೆದಿದ್ದು, ಹಾಗೆಯೇ ಬ್ರಹ್ಮಕಲಶದ ಸಂದರ್ಭದಲ್ಲಿ ವಿದ್ಯುತ್ ಟ್ಯೂಬ್ಲೈಟ್ ಒಡೆದಿದ್ದು ಇದೆಲ್ಲವೂ ಸಭಾಭವನದ ಎದುರಿನ ಕೆಚೂರು ರಸ್ತೆಯಲ್ಲಿ ನಡೆದಿದ್ದು, ದೇವಸ್ಥಾನಕ್ಕೆ ಸಂಬಂಧಪಟ್ಟ ಅಡುಗೆ ಕೋಣೆಯಲ್ಲಿ ನಡೆದಿಲ್ಲ ಎಂದು ಸುಳ್ಳು ಹೇಳಿಕೆ ಕೊಟ್ಟಿದ್ದಾರೆ'' ಎಂದು ಆರೋಪಿಸಿದರು.
''ಪ್ರವೀಣ ಆಚಾರಿ ಮತ್ತು ಆತನ ಸಹೋದರ ಪ್ರಸಾದ್ ಆಚಾರಿ ಮತ್ತಿತರ ಕುಕೃತ್ಯಕ್ಕೆ ಧರ್ಮ ಬಿಟ್ಟು ಬೆಂಬಲ ನಿಂತಿರುವುದು ದೇವಿಯ ಸಾನಿಧ್ಯದ ಅಪವಿತ್ರಕ್ಕೆ ಇವರುಗಳೂ ಕೂಡಾ ನೇರ ಹೊಣೆಯಾಗಿರುತ್ತಾರೆ ಎಂದು ಹೇಳಿದ ಅವರು, ಮತ್ತೋರ್ವ ನಾಯಕ ಬಿ.ಎನ್ ಶಂಕರ ಪೂಜಾರಿ ಫೋನ್ ಸಂಭಾಷಣೆಯಲ್ಲಿ ಮತ್ತು ಸಾರ್ವಜನಿಕವಾಗಿ ನನ್ನ ಬಗ್ಗೆ ಅಪಪ್ರಚಾರ ಮಾಡಿರುದ್ದನ್ನು ಖಂಡಿಸುತ್ತೇನೆ'' ಎಂದರು.
''ಕೆಲವು ವರ್ಷಗಳ ಹಿಂದೆ ತೀರಾ ಬಡತನದಲ್ಲಿದ್ದ ಈ ವ್ಯಕ್ತಿ ಈಗ ನೂರಾರು ಕೋಟಿಯ ಆಸ್ತಿಯ ವಾಗಿದ್ದು ಹೇಗೆ? ಇದರ ಗುಟ್ಟೇನು? ಇದನ್ನು ತಿಳಿಸುವಿರಾ? ಸಮಾಜದ ದೊಡ್ಡ ಗೌರವಾನ್ವಿತ ಬಿ.ಎನ್ ಶಂಕರ ಪೂಜಾರಿಯನ್ನು ಅದೇ ಸನ್ನಿಧಿಗೆ ಆಣೆ ಪ್ರಮಾಣಕ್ಕೆ ಕರೆಯುತ್ತಿದ್ದೇನೆ. ಯಾರು 420 ನಿರ್ಧಾರವಾಗಲಿ'' ಎಂದರು.
''ಮತ್ತೊಂದು ವಿಚಾರವನ್ನು ನಿಮ್ಮ ಗಮನಕ್ಕೆ ತರುತ್ತಿದ್ದು, ಬಾರ್ಕೂರು ಜೈನ ಬಸದಿಗೆ ಸಂಬಂಧಪಟ್ಟ ಸ್ಥಳವನ್ನು ಮಂಜಪ್ಪ ಪೂಜಾರಿ ಮತ್ತು ಕುಟುಂಬ ಅಕ್ರಮವಾಗಿ ಉಪಯೋಗಿಸುತ್ತಿದ್ದು ಜಿಲ್ಲಾ ಆಡಳಿತ ಆದಷ್ಟು ಬೇಗ ಆ ಸ್ಥಳವನ್ನು ಜೈನ ಸಮುದಾಯಕ್ಕೆ ನೀಡುವ ಕೆಲಸ ಮಾಡದಿದ್ದರೆ ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಅಮರಾಣಂತ ಉಪವಾಸ ಮಾಡುತ್ತೇನೆ. ಅಪರಾಧಿಗಳಿಗೆ ಜಾಮೀನು ನೀಡಿರಬಹುದು. ನ್ಯಾಯದೇವತೆ ನನ್ನ ಪರವಾಗಿ ಇದ್ದಾಳೆ ಎಂಬುದು ನನ್ನ ನಂಬಿಕೆ. ನಾನು ಸಸ್ಯಹಾರಿ ಆಗಿದ್ದು, ದೇವಿಯ ನಿತ್ಯ ಪೂಜಾ ಅರ್ಚಕನಾಗಿರುವ ಕಾರಣ ನನ್ನ ಸತ್ಯಕ್ಕೆ ದೇವಿಯ ಆಶಿರ್ವಾದ ಖಂಡಿತ ನನ್ನ ಮೇಲೆ ಇದೆ ಎನ್ನುವ ನಂಬಿಕೆ ನನಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್ ಕೂಡಾ ರವರ ವಿರುದ್ಧ ಲೋಕಾಯುಕ್ತದಲ್ಲಿ ಆರೋಪ ಸಾಬೀತಾಗಿದ್ದು ಅದರ ವಿರುದ್ಧ ನನ್ನ ಕಾನೂನು ಹೋರಾಟ ಮುಂದುವರೆಸುತ್ತೇನೆ. ತಪ್ಪಿತಸ್ಥರ ವಿರುದ್ಧ ಸಂಬಂಧ ಪಟ್ಟ ಇಲಾಖೆ ಕಠಿಣ ಕೈಗೊಳ್ಳಲಿ'' ಎಂದು ಆಗ್ರಹಿಸಿದರು.
ವಿವಿಧ ಸಂಘಟನೆಗಳ ಪ್ರಮುಖರಾದ ದ, ಸಂ. ಸ ರಾಜ್ಯ ಸಂಚಾಲಕ ಶೇಖರ್ ಹಾವಂಜೆ, ಉಡುಪಿ ಜಿಲ್ಲೆ ಆರ್.ಟಿ.ಐ ಕಾರ್ಯಕರ್ತರ ಸಮಿತಿ ಅಧ್ಯಕ್ಷರಾದ ಸದಾಶಿವ ಶೆಟ್ಟಿ ಹೇರೂರು, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಸುಜಯ ಪೂಜಾರಿ, ಪ್ರಮೋದ್ ಉಚ್ಚಿಲ ಉಪಸ್ಥಿತರಿದ್ದರು.