ಮಂಗಳೂರು, ಮಾ 19 (DaijiworldNews/MS): ವಿಮಾನ ನಿಲ್ದಾಣವೊಂದಕ್ಕೆ, ಅತ್ಯುತ್ತಮ ಸಂಸದೀಯ ಪಟು ದಿವಂಗತ ಜಾರ್ಜ್ ಫರ್ನಾಂಡಿಸ್ ಅವರ ಹೆಸರನ್ನ ಇಡಬೇಕು ಎಂದು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರು ಅವರಿಗೆ ರಾಜ್ಯಸಭಾ ಸದಸ್ಯ ಸುರೇಶ್ ಪ್ರಭು ಮನವಿ ಮಾಡಿದ್ದಾರೆ.
ಮೂಲತಃ ಮಂಗಳೂರಿನವರಾದ ದಿ. ಜಾರ್ಜ್ ಫರ್ನಾಂಡಿಸ್ ಮಾಜಿ ರಕ್ಷಣಾ ಸಚಿವರು ,ತುರ್ತು ಪರಿಸ್ಥಿತಿ ವಿರೋಧಿ ಹೋರಾಟಗಾರು ,ಅಪ್ರತಿಮ ಹೋರಾಟಗಾರರು, ಹಲವು ಬಾರಿ ಸಚಿವರಾಗಿದ್ದಲ್ಲದೆ ಅತ್ಯುತ್ತಮ ದೂರದೃಷ್ಟಿಯ ಯೋಜನೆಗಳ ಮೂಲಕ ದೇಶದಲ್ಲಿ ಮನೆಮಾತಾಗಿದ್ದಾರೆ, ಆದ್ದರಿಂದ ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನು ಇಡುವುದು ಉತ್ತಮ ಎಂದು ಪತ್ರದಲ್ಲಿ ಸಲಹೆ ನೀಡಿದ್ದಾರೆ.
ಕಾರ್ಮಿಕ ಹೋರಾಟಗಾರ, ಮಾನವ ಹಕ್ಕುಗಳ ಹೋರಾಟಗಾರ, ಪತ್ರಕರ್ತ, ಸಮಾಜವಾದಿ, ರಾಜಕಾರಣಿ, ಕ್ರಿಯಾಶೀಲ ವ್ಯಕ್ತಿಯಾಗಿದ್ದ ಜಾರ್ಜ್ ಫರ್ನಾಂಡೀಸ್ 2019 ರ ಜ. 29ರಂದು ನಿಧನರಾಗಿದ್ದರು.