ಕಾರ್ಕಳ, ಮಾ 13 (DaijiworldNews/MS): ಹೊಳೆಯ ಬದಿ ಎಸೆದ ಅವಧಿ ಮೀರಿದ ಆಹಾರವನ್ನು ತಿಂದ ಹಸುಗಳು ಮೃತಪಟ್ಟ ಘಟನೆ ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳ ತಾಲೂಕಿನ ಜೋಹಲ್ಬೆಟ್ಟು ನದಿಯ ಹತ್ತಿರ ಸುಮಾರು 25 ಗೋಣಿ ಕಡಲೆ ಹಿಟ್ಟನ್ನು ಯಾರೋ ಬಿಸಾಕಿ ಹೋಗಿದ್ದು. ಇದನ್ನು ತಿಂದ ಐದು ಹಸುಗಳು ಸಾವನ್ನಪ್ಪಿದ್ದು ಸುಮಾರು 25 ರಿಂದ 30 ಹಸುಗಳು ಅಸ್ವಸ್ಥಗೊಂಡಿವೆ.
ಈ ದುರುಳರ ಕೃತ್ಯಕ್ಕೆ ಮೂಕ ಪ್ರಾಣಿಗಳು ಬಲಿಯಾಗಿದ್ದು, ಘಟನೆಗೆ ಸಂಬಂಧಿಸಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ತಕ್ಷಣವೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು, ಹಿಂದೂ ಸಂಘಟನೆಯವರು ಆಗ್ರಹಿಸಿದ್ದಾರೆ.