ಮಂಗಳೂರು, ಮಾ 13 (DaijiworldNews/MS): ಒಬ್ಬಂಟಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರು ಇಂದು ಬೆಳಗ್ಗೆ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಕುಂಪಲದಲ್ಲಿ ನಡೆದಿದೆ. ಮೃತರನ್ನುಕುಂಪಲ ನಿವಾಸಿ ರಾಧಾಕೃಷ್ಣ ಗೌಡ (40) ಎಂದು ಗುರುತಿಸಲಾಗಿದೆ. ಕಡಬ ಮರ್ದಾಳ ಮೂಲದವರಾದ ಇವರು ವರ್ಷದ ಹಿಂದೆಯಷ್ಟೇ ಕಡಬದ ಜಯಂತಿ ಎಂಬವರನ್ನು ವಿವಾಹವಾಗಿದ್ದರು.ಇವರುಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು.
ರಾಧಾಕೃಷ್ಣ ಅವರ ಪತ್ನಿ ಹೆರಿಗೆಗಾಗಿ ತವರು ಮನೆಗೆ ಹೋಗಿದ್ದರು. ಹೀಗಾಗಿ ಅವರು ಒಬ್ಬಂಟಿಯಾಗಿ ವಾಸವಾಗಿದ್ದರು. ರಾಧಾಕೃಷ್ಣ ವಾಸಿಸುತ್ತಿದ್ದ ಬಾಡಿಗೆ ಮನೆಯ ಮಾಲೀಕರು ಶನಿವಾರ ಬೆಳಿಗ್ಗೆ ಪರಿಶೀಲಿಸಿದಾಗ, ರಾಧಾಕೃಷ್ಣ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತು.
ಮೃತರು ಉಲ್ಲಾಲ್ಬೈಲ್ನಲ್ಲಿ ಗ್ಯಾರೇಜ್ ಹೊಂದಿದ್ದರು.