ಕಾರ್ಕಳ, ಮಾ.04 (DaijiworldNews/HR): ನಿವೃತ್ತ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ಆಕಸ್ಮಿಕವಾಗಿ ಸ್ವರ್ಣ ನದಿಗೆ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತರನ್ನು ರತ್ನಾಕರ್ ಎಸ್ಸಿ (63) ಎಂದು ಗುರುತಿಸಲಾಗಿದೆ.
ರತ್ನಾಕರ್ ಕಾರ್ಕಳ ತಾಲ್ಲೂಕಿನ ಯರ್ಲಪಾಡಿಯ ಗೋವಿಂದೂರಿನಲ್ಲಿ ರಾಮಕೃಷ್ಣ ಆಶ್ರಮದಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ವರದಿಯ ಪ್ರಕಾರ, ಮಾರ್ಚ್ 3 ರಂದು ರತ್ನಾಕರ್ ಅವರು ಸ್ವರ್ಣ ನದಿಯಲ್ಲಿ ಸ್ನಾನಕ್ಕೆಂದು ಇಳಿ್ಯಲು ಹೋಗಿದ್ದಾಗ ಆಕಸ್ಮಿಕವಾಗಿ ಜಾರಿಬಿದ್ದು ನೀರಿನಲ್ಲಿ ಬಿದ್ದು ಮುಳುಗಿದ್ದಾರೆ ಎನ್ನಲಾಗಿದೆ.
ಮೂಲತಃ ಶಿವಮೊಗ್ಗ ಮೂಲದ ರತ್ನಾಕರ್ ನಾಲ್ಕು ವರ್ಷಗಳ ಹಿಂದೆ ಇಸ್ರೋದಿಂದ ನಿವೃತ್ತರಾಗಿದ್ದರು.
ಕಾರ್ಕಳ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.