ಮಂಗಳೂರು, ಮಾ.02 (DaijiworldNews/MB) : ''ಮಂಗಳೂರು ಜೈಲು ಮೇಲ್ದರ್ಜೆಗೇರಿಸಲಾಗುತ್ತದೆ. ಗಾಂಜಾ ಬಳಕೆ ತಡೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು'' ಎಂದು ಬಂಧೀಖಾನೆ ಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ''ಮಂಗಳೂರು ಜೈಲಿನಲ್ಲಿ ಅಧಿಕ ಭದ್ರತೆಯ ಜೈಲನ್ನಾಗಿ ಪರಿವರ್ತನೆ ಮಾಡಲಾಗುವುದು. ಜೈಲಿನಲ್ಲಿ ಮೊಬೈಲ್, ಗಾಂಜಾ ಬಳಕೆ ತಡೆಗೆ ಅಗತ್ಯವಾದ ಕ್ರಮ ತೆಗೆದುಕೊಳ್ಳಲಾಗಿದೆ ಆದರೆ ಅಂತಹ ದೂರುಗಳು ಬಂದಿಲ್ಲ'' ಎಂದು ಕೂಡಾ ಹೇಳಿದರು.
''ಕೊರೊನಾ ಇನ್ನೂ ಕೂಡಾ ಸಂಪೂರ್ಣವಾಗಿ ಕಡಿಮೆಯಾಗದ ಕಾರಣದಿಂದಾಗಿ ಖೈದಿಗಳನ್ನುಸಂದರ್ಶಕರು ನೇರವಾಗಿ ಭೇಟಿ ಮಾಡುವಂತಿಲ್ಲ ಪೋನ್, ಇ-ಮುಲಾಖಾತ್ ಮೂಲಕ ಸಂದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು'' ಎಂದರು.
ಇನ್ನು, ''ಬಂಟ್ವಾಳ ಮುಡಿಪುವಿನಲ್ಲಿ ಹೊಸ ಸೆಂಟ್ರಲ್ ಜೈಲು ಕಾಮಗಾರಿ ನಡೆಯುತ್ತಿದೆ. ಇನ್ನೆರಡು ವರ್ಷದಲ್ಲಿ ಸಂಪೂರ್ಣವಾಗಲಿದೆ. ಅದರಲ್ಲಿ ಒಂದು ಸಾವಿರ ಖೈದಿಗಳಿಗೆ ಇರಲಾಗುವ ವ್ಯವಸ್ಥೆಯಿದೆ'' ಎಂದು ಕೂಡಾ ಮಾಹಿತಿ ನೀಡಿದರು.