ಉಳ್ಳಾಲ, ಮಾ 02 (DaijiworldNews/MS): ತೋಟದಿಂದ ಸೋಗೆ ತರುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿ ಬಂದು ಸರ ಎಳೆದು ಪರಾರಿಯಾದ ಕಳ್ಳನನ್ನು ಕೊಣಾಜೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಪಾನೇಲ ನಿವಾಸಿ ಇರ್ಷಾದ್ (23) ಎಂದು ಗುರುತಿಸಲಾಗಿದೆ. ಬೋಳಿಯಾರ್ ನಿವಾಸಿಯಾದ ಶಾಂಭವಿ ಅವರು ತಮ್ಮಮನೆ ಸಮೀಪದ ತೋಟದಿಂದ ಸೋಗೆ ತರುವಾಗ ಹಿಂದಿನಿಂದ ಬಂದಿದ್ದ ಆರೋಪಿ ಮಹಿಳೆಯ ಸರ ಎಳೆದು ಪರಾರಿಯಾಗಿದ್ದ.
ಈ ಬಗ್ಗೆ ಮಾಹಿತಿ ಮೇರೆಗೆ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ಇರ್ಷಾದ್ ಅತ್ಯಾಚಾರ ಯತ್ನ ಪ್ರಕರಣದಲ್ಲೂ ಭಾಗಿಯಾಗಿದ್ದೂ , ಬಂಧಿತನಾಗಿದ್ದ ಈತ ವಾರದ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಜನವರಿ ತಿಂಗಳಲ್ಲಿ ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಕಿದ್ದ ಯುವತಿಯ ಅತ್ಯಾಚಾರ ಯತ್ನಿಸಿ ಬಂಧಿತನಾಗಿ ಯತ್ನಿಸಿ ಜೈಲು ಸೇರಿದ್ದ. ಹೊರಬಂದ ಈತ ವಾರದ ಕಳೆಯುವ ಮುಂಚೆಯೇ ಸರ ಕಳ್ಳತನ ಯತ್ನಿಸಿದ್ದ.