ಮಂಗಳೂರು, ಫೆ. 28 (DaijiworldNews/SM): ನನ್ನಂತವರು ಬ್ರಹ್ಮ ಶ್ರೀ ಪ್ರಶಸ್ತಿಗೆ ಅರ್ಹರಲ್ಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಹ್ಮ ಶ್ರೀ ಪ್ರಶಸ್ತಿಗೆ ಅರ್ಹರಾದ ಏಕೈಕ ವ್ಯಕ್ತಿಯೆಂದರೆ ಅದು ಜನಾರ್ದನ ಪೂಜಾರಿ ಮಾತ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರು ವಿಧಾನಸಭಾ ಕ್ಷೇತ್ರ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ 'ಮೆರುಗು-2021' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆ.ಟಿ ಸುವರ್ಣ ಅವರು ಈ ಕಾರ್ಯಕ್ರಮ ಉದ್ಘಾಟನೆಗೆ ಕರೆದಿದ್ದರು. ಪತ್ರಿಕೆಯಲ್ಲಿ ನೋಡಿದಾಗ ನಳಿನ್ ಗೆ ಬ್ರಹ್ಮ ಶ್ರೀ ಪ್ರಶಸ್ತಿ ಎನ್ನುವ ಬರಹ ಇತ್ತು. ತಕ್ಷಣ ಅವರನ್ನು ಸಂಪರ್ಕಿಸಿ ಸನ್ಮಾನ, ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಮನವಿ ಮಾಡಿದ್ದೆ. ನನ್ನಂತವರು ಬ್ರಹ್ಮ ಶ್ರೀ ಪ್ರಶಸ್ತಿಗೆ ಅರ್ಹರಲ್ಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಹ್ಮ ಶ್ರೀ ಪ್ರಶಸ್ತಿಗೆ ಅರ್ಹರಾದ ಏಕೈಕ ವ್ಯಕ್ತಿಯೆಂದರೆ ಅದು ಜನಾರ್ಧನ ಪೂಜಾರಿ ಮಾತ್ರ ಎಂದು ಅವರು ಹೇಳಿದ್ದಾರೆ.
ನಾನು ಅಷ್ಟು ಎತ್ತರಕ್ಕೆ ಏರಿಲ್ಲ. ಪ್ರಶಸ್ತಿ ಸ್ವೀಕರಿಸಲು ಕನಿಷ್ಠ 60 ವರ್ಷ ಆಗಬೇಕು. ಈ ಜಿಲ್ಲೆಯಲ್ಲಿ ರಾಜಕಾರಣಿಗಳ ಪೈಕಿ ಬ್ರಹ್ಮಶ್ರೀ ಪ್ರಶಸ್ತಿ ಪಡೆಯಲು ಏಕೈಕ ಅರ್ಹ ವ್ಯಕ್ತಿ ಎಂದರೆ ಅದು ಜನಾರ್ದನ ಪೂಜಾರಿ ಮಾತ್ರ. ಚುನಾವಣೆಯನ್ನು ಎದುರಿಸುವ ಪ್ರತಿ ಸಂದರ್ಭದಲ್ಲೂ ರಾಜಕೀಯ ಗುರುಗಳಾಗಿರುವ ಜನಾರ್ದನ ಪೂಜಾರಿಯವರ ಆಶೀರ್ವಾದ ಪಡೆದುಕೊಂಡೇ ಮುನ್ನಡೆದಿದ್ದೇನೆ. ಕಳಂಕವಿಲ್ಲದ, ಭ್ರಷ್ಟಾಚಾರ ರಹಿತ ರಾಜಕಾರಣಿ ಜನಾರ್ದನ ಪೂಜಾರಿ ಆದರ್ಶರು ಎಂದು ಸಂಸದ ನಳಿನ್ ಕುಮಾರ್ ಹೇಳಿದ್ದಾರೆ.