ಮಂಗಳೂರು, ಫೆ.27 (DaijiworldNews/MB) : ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರಕ್ ಅನ್ನು ವಶಕ್ಕೆ ಪಡೆಯಲೆಂದು ನಗರ ಪೊಲೀಸ್ ಆಯುಕ್ತರಾದ ಶಶಿ ಕುಮಾರ್ ಮತ್ತು ಡಿಸಿಪಿ ಹರಿರಾಮ್ ಅವರು ಒಂದು ವಿಶಿಷ್ಟ ಕಾರ್ಯಾಚರಣೆ ನಡೆಸಿದ್ದಾರೆ.
ಆಯುಕ್ತರು ಹಾಗೂ ಡಿಸಿಪಿ ಇಬ್ಬರೂ ಸ್ಕೂಟರ್ನಲ್ಲಿ ತೆರಳಿ ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯ ಮೇಲೆ ದಾಳಿ ನಡೆಸಿದರು.
ಇಬ್ಬರೂ ಪೊಲೀಸ್ ಅಧಿಕಾರಿಗಳು ತಲಪಾಡಿ ಟೋಲ್ ಗೇಟ್ ನಲ್ಲಿ ಟ್ರಕ್ ನಿಲ್ಲಿಸಿದ್ದಾರೆ. ಟ್ರಕ್ ಸೋಮೇಶ್ವರ ಬೀಚ್ನಿಂದ ಕೇರಳಕ್ಕೆ ಮರಳನ್ನು ಸಾಗಿಸುತ್ತಿತ್ತು. ಲಾರಿಯ ಬೆಂಗಾವಲಿನಲ್ಲಿದ್ದ ವಾಹನಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಾರಿಯ ಬೆಂಗಾವಲಿನಲ್ಲಿದ್ದ ಬಂದ್ರ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.