ಉಡುಪಿ, ಫೆ. 23 (DaijiworldNews/SM): ಪರ್ಕಳ ಸ್ವಾಗತ್ ಹೋಟೆಲ್ ಬಳಿಯಿರುವ ಕಾಂಗ್ರೆಸ್ ಕಚೇರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.
ಇಲ್ಲಿನ ಕಾರ್ಯಕರ್ತರು ಸಿದ್ದರಾಮಯ್ಯನವರು ವರುಣಾ ಕ್ಷೇತ್ರದಿಂದ ಗೆಲ್ಲಲು ಹರಕೆ ಹೊತ್ತಿದ್ದರು. ಈ ನೆನಪಿಗಾಗಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಈ ಭೇಟಿಯನ್ನು ಏರ್ಪಡಿಸಲಾಗಿತ್ತು. ಕರ್ನಾಟಕದಲ್ಲಿ ಯಶಸ್ವಿ ಯೋಜನೆಯಾದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಅನ್ನಭಾಗ್ಯದ ಸರಕಾರಿ ಮಟ್ಟದ ಲಾಂಛನದಲ್ಲಿ ಪ್ರಚಾರಪಡಿಸಿದ ನಿಜವಾದ ಫಲಾನುಭವಿಯಾದ ಸ್ಥಳೀಯರಾದ ಲಲಿತಾ ಪ್ರಭು ಪರ್ಕಳ ಅವರನ್ನು ಭೇಟಿ ಮಾಡಿ ವಿಚಾರಿಸಿದರು.
ಸಿದ್ದರಾಮಯ್ಯ, ಪ್ರಮೋದ್ ಮಧ್ವರಾಜ್, ರಮಾನಾಥ ರೈ, ಯು.ಟಿ. ಖಾದರ್, ಮೈದಿನ್ ಭಾವ ಕವಿತಾ ಸನಿಲ್, ಸ್ಥಳೀಯ ಮುಖಂಡರಾದ ಮೋಹನ್ ದಾಸ್ ನಾಯಕ್ ಪರ್ಕಳ, ಗಣೇಶ ರಾಜ್ ಸರಳಬೆಟ್ಟು, ಜಯಶೆಟ್ಟಿ ಬನ್ನಂಜೆ, ಎ,ಪಿ, ರಾವ್ ಅಚ್ಚುತ ನಗರ ಬಿ,ಜಯರಾಂ, ಪರ್ಕಳ, ಸುಕೇಶ್ ಕುಂದರ್ ಹೆರ್ಗಾ,ಸದಾನಂದ ಪೂಜಾರಿ, ಉಪೇಂದ್ರ ನಾಯ್ಕ್, ತುಳಜಾ ಪರ್ಕಳ ಗಣೇಶ್ ಶೆಟ್ಟಿ ಕೀಳಂಜೆ, ದೇವೇಂದ್ರ ನಾಯಕ್ ವಾಲ್ಟರ್ ಡಿಸೋಜಾ ಕೊಳಲಗಿರಿ, ದೇವಿಪ್ರಸಾದ್, ಆಚಾರ್ಯ, ದೇವೇಂದ್ರ ನಾಯ್ಕ್, ಲಲಿತಾ ಪ್ರಭು, ಉಷಾ ನಾಯಕ್, ಹರೀಶ್ ಶೆಟ್ಟಿ ಕೀಳಂಜೆ ಸುರೇಶ್ ನಾಯಕ್ ಹಿರೇಬೆಟ್ಟು, ಸುಧೀರ್ ಪಟ್ಲ ಉಪಸ್ಥಿತರಿದ್ದರು.