ಉಡುಪಿ, ಫೆ.10 (DaijiworldNews/MB) : ಕೆಮ್ಮಣ್ಣು ಪಡುತೋನ್ಸೆ ಬಳಿಯ ಹ್ಯಾಂಗಿಂಗ್ ಬ್ರಿಡ್ಜ್ ಅಂದರೆ ವೀಕೆಂಡ್ ದಿನ ಪ್ರವಾಸಿಗರ ದಂಡೇ ಅಲ್ಲಿಗೆ ಬರುತ್ತೆ. ಇತ್ತೀಚೆಗೆ ಕಯಾಕಿಂಗ್ ಕೂಡ ಪ್ರಾರಂಭವಾಗಿದೆ. ಹಾಗಾಗಿ ಎಲ್ಲೋ ಮರೆಯಲ್ಲಿದ್ದ ಸ್ಥಳೀಯರಿಗಷ್ಟೇ ಸೀಮಿತವಾಗಿದ್ದ ತೂಗು ಸೇತುವೆ ಇದೀಗ ಜನಾಕರ್ಷಣೀಯವಾಗಿದೆ.
ಸ್ವರ್ಣ ನದಿಯು ಸುಂದರವಾಗಿ ಹರಿಯುವ ದೃಶ್ಯವನ್ನು ಕಣ್ತುಂಭಿ ಕೊಳ್ಳಲು ದೂರದೂರಿನಿಂದ ಜನ ಇಲ್ಲಿಗೆ ಬರುತ್ತಾರೆ. ಮೊದಲು ಈ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಪ್ರವಾಸಿಗರ ದಟ್ಟಣೆ ಕಡಿಮೆ ಇತ್ತು. ಆಧರೆ ಈ ಕಯಾಕಿಂಗ್ ಆದಮೇಲೆ ಬರುವವರ ಸಂಖ್ಯೆ ಹೆಚ್ಚು. ಸೇತುವೆ ಮಧ್ಯದಲ್ಲಿ ಗುಂಪಾಗಿ ಸೆಲ್ಪಿ ತೆಗೆದುಕೊಳ್ಳುತ್ತಿದ್ದಾರೆ. ಈ ದೃಶ್ಯವನ್ನು ನೋಡಿ ಸಹಜವಾಗಿಯೇ
ಸು. 1991 ವರ್ಷಗಳ ಹಿಂದಿನ ಈ ಬ್ರಿಡ್ಜ್ ತಿಮ್ಮಣ್ಣ ಕುದ್ರು ಮತ್ತು ಪಡುಕುದ್ರು ದ್ವೀಪದ ಜನರನ್ನು ಸಂಪರ್ಕಿಸಲು ಈ ಸೇತುನಿರ್ಮಾಣವಾಗಿದ್ದು 2015 ರಲ್ಲಿ 10ಲಕ್ಷ ರೂ ವೆಚ್ಚದಲ್ಲಿ ನವೀಕರಿಸಲಾಯಿತು.
ಇದರಲ್ಲಿ ಸೇತುವೆಯಿಂದ ಆಚೆಗೆ ಹೋಗಲು ದ್ವಿಚಕ್ರ ವಾಹನಕ್ಕೆ ಅವಕಾಶವಿದೆ. ಆದರೆ ಬಾರಿ ತೂಕದ ವಾಹನ ಹೋಗುವಂತಿಲ್ಲ. ಸುರಕ್ಷತಾ ಕ್ರಮದೊಂದಿಗೆ ಕಯಾಕಿಂಗ್ ಚಟುವಟಿಕೆ ನಡೆಯುತ್ತಿದೆ. ಆದರೆ ಸೇತುವೆಯ ಮೇಲೆ ಯಾವೊಬ್ಬ ಅಧಿಕೃತ ಭದ್ರತಾ ಸಿಬ್ಬಂದಿ ಕೂಡ ಇಲ್ಲ. ಜನ ಜಾತ್ರೆ ಹರಿದು ಬರುತ್ತಿರುವುದನ್ನು ಕಂಡು ಅಲ್ಲಿನ ಸ್ಥಳೀಯರು ಭಯಬೀತಿ ಉಂಟಾಗಿದೆ. ಸಂಬಂಧ ಪಟ್ಟ ಇಲಾಖೆಯವರು ಇದನ್ನು ಗಮನಿಸಬೇಕೆಂದು ಅಲವತ್ತು ಕೊಂಡಿದ್ದಾರೆ.
"ಈ ಸೇತುವೆ ಐದು ವರ್ಷದ ಹಿಂದೆ ನವೀಕರಿಸಿದ್ದೇವೆ. ಇದರಲ್ಲಿ ಇಂತಿಷ್ಟೆ ಮಂದಿ ಇರಬೇಕು ಅಂತ ಏನು ಇಲ್ಲ. ಒಮ್ಮೆ ಜನಸಾಗರ ಬರುವುದನ್ನು ನೋಡಿ ಅಲ್ಲಿನ ಜನ ಕಂಗಾಲಾಗಿರಬಹುದು. ಅದಕ್ಕೆ ಭಾರವನ್ನು ತಡೆದು ಕೊಳ್ಳುವ ಶಕ್ತಿಯಿದೆ. ಸ್ಥಳೀಯರು ಯಾರು ಉದ್ವೇಗಕ್ಕೆ ಒಳಗಾಗಬಾರದು. ದ್ವಿಚಕ್ರವಾಹನ ಕೂಡ ಹೋಗಬಹುದು" ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಯೊಬ್ಬರು ದಾಯ್ಜಿವಲ್ಡ್ಗೆ ಮಾಹಿತಿ ತಿಳಿಸಿದ್ದಾರೆ.