ಕಾಸರಗೋಡು, ಫೆ. 09 (DaijiworldNews/HR): ಕಾರು ಮತ್ತು ಪಿಕಪ್ ವ್ಯಾನ್ ನಡುವೆ ಉಂಟಾದ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಗಾಯಗೊಂಡ ಘಟನೆ ಮಂಗಳವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಪೆರುವಾಡ್ನಲ್ಲಿ ನಡೆದಿದೆ.
ಓರ್ವನ ಸ್ಥಿತಿ ಗಂಭೀರವಾಗಿದ್ದು, ಗಾಯಗೊಂಡವರನ್ನು ವಡಗರ ಚೆರೋಡ್ನ ಜಿತಿನ್ (37), ತಂದೆ ರಾಜನ್ (70), ಶೈಲಜಾ (60), ಜಿತಿನ್ರ ಪತ್ನಿ ಗ್ರೀಷ್ಮಾ(28) ಪುತ್ರ ಧೀರಜ್ ಎಂದು ಗುರುತಿಸಲಾಗಿದೆ.
ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಮತ್ತು ಮಂಗಳೂರಿನಿಂದ ಕಾಸರಗೋಡಿಗೆ ಸರಕು ಹೇರಿಕೊಂಡು ಬರುತ್ತಿದ್ದ ಪಿಕಪ್ ವ್ಯಾನ್ ನಡುವೆ ಅಪಘಾತ ನಡೆದಿದ್ದು, ಗ್ರೀಷ್ಮಾ ಮತ್ತು ಧೀರಜ್ರನ್ನು ಮಂಗಳೂರು ಹಾಗೂ ಉಳಿದವರನ್ನು ಕುಂಬಳೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.