ಕುಂದಾಪುರ, ಫೆ.09 (DaijiworldNews/MB) : ಫೆಬ್ರವರಿ 8 ರ ಸೋಮವಾರ ರಾತ್ರಿ 10.30 ರ ಸುಮಾರಿಗೆ ಚರ್ಚ್ ರೋಡ್ನ ಚರ್ಚ್ ಬಳಿಯ ಕಾಂಕ್ರೀಟ್ ರಸ್ತೆಯಲ್ಲಿ ಕಾರೋಂದು ವೇಗವಾಗಿ ಬಂದು ಬೈಕ್ಗೆ ಗುದ್ದಿದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಮೃತರನ್ನು ಇಲ್ಲಿನ ಮದ್ದುಗುಡ್ಡೆಯ ಕಿರಣ್ ಮೇಸ್ತಾ (24) ಮತ್ತು ನೇರಳಕಟ್ಟೆ ಗ್ರಾಮದ ರವೀಂದ್ರ ಕುಮಾರ್ (25) ಎಂದು ಗುರುತಿಸಲಾಗಿದೆ. ಇಬ್ಬರೂ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದರು.
ವರದಿಗಳ ಪ್ರಕಾರ, ಕಾರು ಹೆಚ್ಚಿನ ವೇಗದಲ್ಲಿ ಮದ್ದುಗುಡ್ಡೆಯಿಂದ ಪಟ್ಟಣದ ಕಡೆಗೆ ಚಲಿಸುತ್ತಿತ್ತು. ಕಾರನ್ನು ಅಜಾಗಾರೂಕತೆಯಿಂದ ಚಲಾಯಿಸಲಾಗಿದ್ದು ಮುಂಭಾಗದಲ್ಲಿದ್ದ ಬೈಕ್ಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ನಲ್ಲಿದ್ದ ಇಬ್ಬರ ತಲೆಗೆ ಗಂಭೀರ ಗಾಯಗಳಾಗಿದ್ದು ಇಬ್ಬರನ್ನೂ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಆಸ್ಪತ್ರೆಗೆ ತಲುಪುವ ಮುನ್ನವೇ ಅವರು ಮೃತಪಟ್ಟರು.
ಈ ಬಗ್ಗೆ ಇಲ್ಲಿನ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.