ಉಡುಪಿ, ಫೆ. 09 (DaijiworldNews/HR): ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಯೋಗೇಶ್ ಪೂಜಾರಿ, ಲಕ್ಷ್ಮೀನಗರ ತೆಂಕನಿಡಿಯೂರು ಇವರ ವಾರಸುದಾರರಿಗೆ ಶಾಸಕ ಕೆ. ರಘುಪತಿ ಭಟ್ ಅವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ. 1.00 ಲಕ್ಷ ಮೊತ್ತದ ಚೆಕ್ ವಿತರಿಸಿದ್ದಾರೆ.
ಸೋಮವಾರದಂದು ಶಾಸಕ ರಘುಪತಿ ಭಟ್ ಅವರು ಯೋಗೀಶ್ ಪೂಜಾರಿ ಮನೆಗೆ ತೆರಳಿ ಅವರ ತಂಗಿ ಸುಲಕ್ಷ ಅವರಿಗೆ ಚೆಕ್ ವಿತರಿಸಿದರು.
ಈ ಸಂದರ್ಭ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ವಿಜಯಪ್ರಕಾಶ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಶರತ್ ಬೈಲಕೆರೆ, ಪಂಚಾಯತ್ ಸದಸ್ಯರಾದ ಪ್ರದೀಪ್ ಶೆಟ್ಟಿ, ಪುಷ್ಪಾ, ಸ್ಥಳೀಯರಾದ ಸುನಂದ ಶೆಟ್ಟಿ, ರಂಜಿಪ್ ಶೆಟ್ಟಿ, ಹರೀಶ್ ಲಕ್ಷ್ಮೀನಗರ, ಸುಧಾಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.