ಮಂಗಳೂರು, ಫೆ. 05 (DaijiworldNews/SM): ಸಮಾಜದಲ್ಲಿ ಕಲಿತವರಿಂದಲೇ ಅನಾಹುತ ಆಗುವುತ್ತಿದ್ದು, ಸಮಾಜವನ್ನು ವಿಕೃತಿ ಮಾಡಿದಾಗ ಮಸಿ ಬಳಿಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಭಗವಾನ್ ಅಂತ ಯಾಕೆ ಹೆಸರಿಟ್ಟುಕೊಂಡಿದ್ದಾನೆ? ಭಗವಾನ್ ಅಂತಾ ಹೆಸರಿಟ್ಟುಕೊಂಡು ಮಸಿ ಬಳಿಸಿಕೊಂಡಿದ್ದಾನೆ. ಅವನು ಹೆಸರನ್ನು ಬದಲಾಯಿಸಿಕೊಳ್ಳಲಿ ಎಂದು ಶ್ರೀಗಳು ಒತ್ತಾಯಿಸಿದ್ದಾರೆ.
ವಕೀಲೆ ಭಗವಾನ್ ಅವರಿಗೆ ಮಸಿ ಬಳಿದದ್ದು ತಪ್ಪೇ ಆದರೂ ಪ್ರತಿಭಟನೆ ಒಳ್ಳೆಯದು ಎಂದು ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.