ಕಾಸರಗೋಡು, ಫೆ. 08 (DaijiworldNews/HR): ಮುಖ್ಯಮಂತ್ರಿಯವರ ದೂರು ಪರಿಹಾರ 'ಅದಾಲತ್ ಸಾಂತ್ವನ ಸ್ಪರ್ಶ' ಸೋಮವಾರ ಮತ್ತು ಮಂಗಳವಾರ ಕಾಸರಗೋಡಿನಲ್ಲಿ ನಡೆಯುತ್ತಿದ್ದು, ಇಂದು ಕಾಞ೦ಗಾಡ್ನಲ್ಲಿ ಅದಾಲತ್ ನಡೆಯುತ್ತಿದೆ.
ಜನರ ಸಮಸ್ಯೆಗಳಿಗೆ, ದೂರುಗಳಿಗೆ ಶೀಘ್ರ ಪರಿಹರಿಸುವ ನಿಟ್ಟಿನಲ್ಲಿ ಸಚಿವರಾದ ಇ. ಚಂದ್ರಶೇಖರನ್, ಕೆ.ಕೆ. ಶೈಲಜಾ ಟೀಚರ್, ಕಡನ್ನಪಳ್ಳಿ ರಾಮ ಚಂದ್ರನ್ ನೇತೃತ್ವದಲ್ಲಿ 'ಸಾಂತ್ವನ ಸ್ಪರ್ಶ' ಅದಾಲತ್ ನಡೆಯುತ್ತಿದೆ ಹೊಸದುರ್ಗ ಮತ್ತು ವೆಳ್ಳರಿಕುಂಡು ತಾಲೂಕು ವ್ಯಾಪ್ತಿಯವರ ದೂರುಗಳ ಪರಿಶೀಲನೆ ನಡೆಯುತ್ತಿದೆ.
ಶಾಸಕ ಎಂ. ರಾಜಗೋಪಾಲ್, ಕೆ. ಕುಂಞರಾಮನ್, ಲೋಕೋಪಯೋಗಿ ಇಲಾಖಾ ಕಾರ್ಯದರ್ಶಿ ಆನಂದ ಬೋಸ್, ಜಿಲ್ಲಾಧಿಕಾರಿ ಡಾ. ಡಿ ಸಜಿತ್ ಬಾಬು, ನಗರಸಭಾ ಅಧ್ಯಕ್ಷೆ ಕೆ.ವಿ ಸುಜಾತಾ, ಉಪಜಿಲ್ಲಾಧಿಕಾರಿ ಡಿ. ಆರ್ ಮೇಘಶ್ರೀ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
ಕಾಸರಗೋಡು ಮತ್ತು ಮಂಜೇಶ್ವರ ತಾಲೂಕು ವ್ಯಾಪ್ತಿಯವರಿಗೆ ಮಂಗಳವಾರ ಬೆಳಿಗ್ಗೆ 10 ರಿಂದ ಕಾಸರಗೋಡು ನಗರಸಭಾ ಕಾನ್ಫರೆನ್ಸ್ ಹಾಲ್ನಲ್ಲಿ ಅದಾಲತ್ ನಡೆಯಲಿದೆ.