ಮಂಗಳೂರು, ಫೆ.08 (DaijiworldNews/MB) : ಕಾರು ಮತ್ತು ಬೈಕು ನಡುವೆ ನಡೆದ ಭೀಕರ ಅಪಘಾತದಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ಎಎಸ್ಐ ತೀವ್ರ ಗಾಯಗೊಂಡಿದ್ದಾರೆ. ಫೆಬ್ರವರಿ 7 ರ ಭಾನುವಾರ ಉಳ್ಳಾಲದ ದುರ್ಗಾಂಬಾ ಗ್ಯಾರೇಜ್ ಎದುರು ಈ ಘಟನೆ ಸಂಭವಿಸಿದೆ. ಗಾಯಗೊಂಡ ಎಎಸ್ಐ ಕೋಡಿ ನಿವಾಸಿ ಶೇಖರ್ ಗಟ್ಟಿ (40) ಎಂದು ಗುರುತಿಸಲಾಗಿದೆ.
ಶೇಖರ್ರೊಂದಿಗೆ ಬೈಕ್ನಲ್ಲಿದ್ದ ಶೇಖರ್ ಅವರ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆದರೆ, ಅಪಘಾತದಲ್ಲಿ ಶೇಖರ್ ಅವರ ಕಾಲುಗಳಿಗೆ ತೀವ್ರವಾಗಿ ಗಾಯಗಳಾಗಿವೆ.
ವರದಿಗಳ ಪ್ರಕಾರ, ಶೇಖರ್ ತನ್ನ ಇಬ್ಬರು ಮಕ್ಕಳೊಂದಿಗೆ ಬುಲೆಟ್ ಬೈಕ್ನಲ್ಲಿ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಕಾಲುಗಳ ಮೇಲೆ ಸಂಚರಿಸಿದೆ. ಕಾರು ಕೇರಳದತ್ತ ಸಾಗುತ್ತಿತ್ತು ಎಂದು ತಿಳಿದುಬಂದಿದೆ.
ಸ್ಥಳೀಯರು ಮತ್ತು ಪೊಲೀಸರು ಕೂಡಲೇ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಸಂಬಂಧ ನಾಗೂರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೇಖರ್ ಅವರು ಎರಡು ವರ್ಷಗಳಿಂದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.