ಮಂಗಳೂರು, ಫೆ. 05 (DaijiworldNews/SM): ಜಿಲ್ಲೆಯಲ್ಲಿ ಈ ಹಿಂದೆ ಬಿಜೆಪಿ ಪಕ್ಷದಿಂದ ಒಬ್ಬ ಶಾಸಕ ಒಬ್ಬ ಸಂಸದನಿದ್ದ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕುಂಟಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದ.ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಈ ಬಾರಿ ಜಿಲ್ಲೆಯಲ್ಲಿ ಏಳು ಮಂದಿ ಶಾಸಕರು ಹಾಗೂ ನಾನೊಬ್ಬ ಸಂಸದ ಸೇರಿಕೊಂಡು ಅಭಿವೃದ್ಧಿಗೆ ಮುಂದಾಗಿದ್ದೇವೆ. ಈ ಹಿಂದೆ ಅಭಿವೃದ್ಧಿಯಲ್ಲಿ ನಮಗೆ ಬೆಂಬಲ ಇರಲಿಲ್ಲ. ಈ ಹಿಂದಿನ ಶಾಸಕರು ಅಧಿಕಾರದಲ್ಲಿ ಗಟ್ಟಿ ಕಟ್ಟಿ ಹೋಗಿದ್ರು. ಅವರಿಂದ ಅಭಿವೃದ್ಧಿ ಕಷ್ಟ ಸಾಧ್ಯವಾಗಿತ್ತು. ನಮಗೆ ಪೂರಕವಾದ ಅನುದಾನ ಒದಗುತ್ತಿರಲಿಲ್ಲ.
ಆದರೆ, ಈಗ ನಮ್ಮ ಶಾಸಕರು ಅಭಿವೃದ್ಧಿ ಕಾರ್ಯಕ್ಕಿಳಿದ್ದಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಶಾಸಕರು ಅಧಿಕಾರದಲ್ಲಿದ್ದು ಹೆಪ್ಪುಕಟ್ಟಿದ್ರು. ಆದರೆ, ನಮ್ಮ ಶಾಸಕರು ಇದೀಗ ಎಲ್ಲರಿಗೂ ಮಾರ್ಗದರ್ಶಿಗಳಾಗಿದ್ದಾರೆ. ಯಾವರೀತಿ ಅಭಿವೃದ್ಧಿ ಕಾರ್ಯ ನಡೆಸಬೇಕು. ಯಾವ ರೀತಿಯಲ್ಲಿ ಅನುದಾನವನ್ನು ತರಬೇಕೆನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.