ಉಡುಪಿ, ಫೆ.07 (DaijiworldNews/PY): ಉದ್ಯೋಗ ಮಾಡಿಕೊಡುವುದಾಗಿ ನಂಬಿಸಿ ಹಣ ಹಾಗೂ ಲ್ಯಾಪ್ಟಾಪ್ ಪಡೆದುಕೊಂಡು ಜನರಿಗೆ ವಂಚಿಸುತ್ತಿದ್ದ ವ್ಯಕ್ತಿಯೋರ್ವನನ್ನು ಉಡುಪಿಯ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಾಪು ನಿವಾಸಿ ನಿಶಾಂತ್ ಎಸ್ ಕುಮಾರ್ (21) ಎಂದು ಗುರುತಿಸಲಾಗಿದೆ.
ಫೆ.6ರ ಶನಿವಾರದಂದು ಪೊಲೀಸರು ನಿಶಾಂತ್ನನ್ನು ಬಂಧಿಸಿದ್ದು, ಆತನಿಂದ ಏಳು ಲ್ಯಾಪ್ಟಾಪ್ ಹಾಗೂ ಸುಮಾರು 1.50 ಲಕ್ಷ ರೂ ಅನ್ನು ವಶಪಡಿಸಿಕೊಳ್ಳಲಾಗಿದೆ.
ಉಡುಪಿ ಎಸ್ಪಿ ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಉಡುಪಿ ಜಿಲ್ಲಾ ಸಿಇಎನ್ ವಿಭಾಗದ ಉಸ್ತುವಾರಿ ರಾಮಚಂದ್ರ ನಾಯಕ್ ಅವರು ಪ್ರಕರಣ ದಾಖಲಿಸಿದ್ದಾರೆ.
ಸಿಇಎನ್ ವಿಭಾಗದ ಸಬ್ ಇನ್ಸ್ಪೆಕ್ಟರ್ ಕೇಶವ್ ಗೌಡ, ಸಿಬ್ಬಂದಿ ಪ್ರಸನ್ನ, ಜೀವನ್, ರಾಘವೇಂದ್ರ ಮತ್ತು ಜೀಪ್ ಚಾಲಕ ಜೀವನ್ ಸಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.