ಉಡುಪಿ, ಜ.26 (DaijiworldNews/PY): ಉಡುಪಿ ಜಿಲ್ಲಾಡಳಿತದ ವತಿಯಿಂದ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಮೀನುಗಾರಿಕಾ ಸಚಿವ ಎಸ್. ಅಂಗಾರ ಉಡುಪಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಗೌರವ ವಂದನೆಯನ್ನು ಸ್ವೀಕರಿಸಿದರು.
ಸಚಿವರಾದ ನಂತರ ಪ್ರಥಮ ಬಾರಿಗೆ ಉಡುಪಿಯಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡಿದ ಅವರು, "ಉಡುಪಿ ನಗರಸಭಾ ವ್ಯಾಪ್ತಿಗೆ 24 ಗಂಟೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ರೂ.338.63 ಕೋಟಿ ಅಂದಾಜು ವೆಚ್ಚದಿಂದ ವಾರಾಹಿ ನದಿಯ ಮೂಲಕ ಮಣಿಪಾಲ ಜಿ.ಎಲ್.ಎಸ್.ಆರ್.ಗೆ ನಿರಂತರವಾಗಿ ಸರಬರಾಜು ಮಾಡಲು ಕೈಗೆತ್ತಿಕೊಂಡಿರುವ ಅಮೃತ ಹಾಗೂ ಎಡಿಬಿ ನರವಿನ ಕ್ವಿಮಿಪ್ ಯೋಜನೆ ಪ್ರಗತಿಯಲ್ಲಿದೆ. ಅಲೆವೂರು ಘನತ್ಯಾಜ್ಯ ನಿರ್ವಹಣೆ ಘಟಕದಲ್ಲಿ ರೂ 177.50 ಲಕ್ಷದಲ್ಲಿ 10 ಟಿಪಿಡಿ ಸಾಮರ್ಥ್ಯದ ಎಂ.ಆರ್.ಎಫ್ ಘಟಕ ನಿರ್ಮಾಣ ಮಾಡಿ ಹಾಗೂ ಸಮಗ್ರ ಘನತ್ಯಜ್ಯ ವಸ್ತು ವಿಲೇವಾರಿ ಬಗ್ಗೆ ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ರೂ. 1441.93 ಲಕ್ಷ ಡಿ.ಪಿ.ಆರ್. ತಯಾರಿಸಿ ಅನುಮೋದನೆಯಾಗಿದ್ದು, ಅದರಲ್ಲಿ ರೂ.731.41 ಲಕ್ಷದ ಸಿವಿಲ್ ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ" ಎಂದು ಹೇಳಿದರು.
"ಪ್ರಧಾನಮಂತ್ರಿ ಆವಾಜ್ ಯೋಜನೆಯು ಪ್ರಗತಿ ಹಂತದಲ್ಲಿದೆ. ಅಲೆವೂರು ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ರೂ.177.50 ಲಕ್ಷದಲ್ಲಿ 10 ಟಿಪಿಡಿ ಸಾರ್ಮಥ್ಯದ ಎಂಆರ್ಎಫ್ ಘಟಕ ನಿರ್ಮಾಣ ಹಾಗೂ ಸಮಗ್ರ ಘನತ್ಯಾಜ್ಯ ವಸ್ತು ವಿಲೇವಾರಿ ಬಗ್ಗೆ ಸ್ವಚ್ಚಭಾರತ್ ಅಭಿಯಾನದಡಿ ರೂ.1441,93 ಲಕ್ಷದ ಡಿ.ಪಿ.ಆರ್ ತಯಾರಿಸಿ, ಅನುಮೋದನೆಯಾಗಿದ್ದು,
ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ (ಪಿಎಂಎವೈ) ವಸತಿರಹಿತ 352 ಅರ್ಜಿದಾರರ ಪ್ರತಿ, 212 ಅರ್ಹ ಫಲಾನುಭವಿಗಳಿಗೆ ವಸತಿ ನಿರ್ಮಿಸಲು ಸಹಾಯಧನವನ್ನು ಮಂಜೂರು ಮಾಡಲಾಗಿದೆ" ಎಂದು ತಿಳಿಸಿದರು.
"ಉಡುಪಿಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗಾಗಿ ಒಟ್ಟು 4 ಹೌಸ್ ಬೋಟ್ ಮತ್ತು 5 ಹೊಂ ಸ್ಟೇ ಗಳಿಗೆ ಅನುಮೋದನೆ ನೀಡಲಾಗಿದೆ. ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ದಿಗಾಗಿ ವಿಷನ್ ಪ್ಲಾನ್-2021-31 ಕರಡು ಪ್ರಸ್ತಾವನೆ ಸಿದ್ದಪಡಿಸಲಾಗುತ್ತಿದೆ" ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಸಿಇಒ ಡಾ. ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಸಿಎಸ್ಪಿ ಎಸ್ಪಿ ಚೇತನ್, ಎಡಿಸಿ ಸದಾಶಿವ ಫ್ರಭು, ನಗರ ಸಭಾ ಅಧ್ಯಕ್ಷೆ ಸುಮಿತ್ರಾ ನಾಯ್ಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮತ್ತು ಶಾಲೆಗಳ ಮುಖ್ಯಸ್ಥರನ್ನು ಮತ್ತು ಕೃಷಿ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.