ಮಂಗಳೂರು, ಜ.22 (DaijiworldNews/PY): ಜಿಲ್ಲಾ ಕಾಂಗ್ರೆಸ್ ಮುಖಂಡ ಪಜೀರು ನಿವಾಸಿ ಉಮರ್ ಪಜೀರು (58) ಹೃದಯಾಘಾತದಿಂದ ಜ.22ರ ಶುಕ್ರವಾರದಂದು ನಿಧನರಾದರು.
ಎದೆ ನೋವಿನ ಕಾರಣ ಉಮರ್ ಅವರನ್ನು ಕಣಚೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತ. ಆದರೆ, ಚಿಕಿತ್ಸೆ ಸ್ಪಂದಿಸದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಉಮರ್ ಅವರು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ, ಬಂಟ್ವಾಳ ಎಪಿಎಂಸಿಯ ಮಾಜಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.