ಕಾರ್ಕಳ, ಜ 20(DaijiworldNews/SM): ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲಾಗಿದೆ. ಆದರೂ ರಾಜ್ಯದ ಕೆಲವು ಕಡೆಗಳಲ್ಲಿ ಅಕ್ರಮವಾಗಿ ಗೋ ಸಾಗಾಟ ಎಗ್ಗಿಲ್ಲದೆ ನಡೆಸಲಾಗುತ್ತಿದೆ. ಇದೀಗ ರಬ್ಬರ್ ತೋಟದಲ್ಲಿ ಕಟ್ಟಿ ಹಾಕಲಾಗಿದ್ದ ಬೆಲೆಬಾಳುವ ದನಗಳು ಕಳವು ಆಗಿರುವ ಘಟನೆ ಕೆರ್ವಾಶೆಯ ಒಂಟೆಜಾರು ಬಾಪ್ರಬೈಲು ಎಂಬಲ್ಲಿ ನಡೆದಿದೆ. ಲಿಜೋ ಮೋನ್ ಜಾರ್ಜ್ ಪ್ರಕರಣದ ದೂರುದಾರರು.
ಕೆರ್ವಾಶೆ ಗ್ರಾಮದ ಒಂಟೆಜಾರು ಬಾಪ್ರಬೈಲು ಎಂಬಲ್ಲಿ ಸಂಸಾರದೊಂದಿಗೆ ವಾಸವಾಗಿದ್ದ ಅವರು ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದಾರೆ. ಜನವರಿ ೧೯ರ ಸಂಜೆ ವೇಳೆಗೆ ಮನೆಯ ಎದುರಿನಲ್ಲಿ ಕಟ್ಟಿ ಹಾಕಿದ್ದ ದನಗಳನ್ನು ರಾತ್ರಿ ವೇಳೆ ಕಟುಕರು ಕಳವುಗೈದಿದ್ದಾರೆ.
ಈ ಕುರಿತು ಲಿಜೋ ಮೋನ್ ಜಾರ್ಜ್ ಅವರು ಮನೆಯ ಹತ್ತಿರದ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಮಾಡಲು ಬಂದಿದ್ದ ವಿಬಿನ್ ಮ್ಯಾಥ್ಯೂ ರವರಲ್ಲಿ ವಿಚಾರಿಸಿದಾಗ ತಾನು ರಾತ್ರಿ ೨:೦೦ ಗಂಟೆ ಸುಮಾರಿಗೆ ಟ್ಯಾಪಿಂಗ್ ಕೆಲಸ ಮುಗಿಸಿ ಮನೆಗೆ ಹೋಗುವಾಗ ಆ ದನಗಳು ಇದ್ದವು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಕೇಸುದಾಖಲಾಗಿರುತ್ತದೆ.