ಕಾಪು, ಜ.13 (DaijiworldNews/PY): ಖಾಸಗಿ ಬಸ್ ಚಾಲಕ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ನಡು ರಸ್ತೆಯಲ್ಲೇ ಹೊಡೆದಾಟಿಕೊಂಡ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಪು ಎಕ್ಸ್ಪ್ರೆಸ್ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಮಂಗಳೂರಿನಿಂದ ಉಡುಪಿಗೆ ಬರುತ್ತಿದ್ದ ಖಾಸಗಿ ಬಸ್ ಕೊಹಿನೂರ್ ಎಕ್ಸ್ಪ್ರೆಸ್ ಹಾಗೂ ಎಕೆಎಂಎಸ್ ಬಸ್ ಸಿಬ್ಬಂದಿಗಳ ನಡುವೆ ವಾಗ್ವಾದ ನಡೆದಿದೆ. ಎಕೆಎಂಎಸ್ ಬಸ್ ಕೊಹಿನೂರ್ ಎಕ್ಸ್ಪ್ರೆಸ್ ಬಸ್ ಅನ್ನು ಹಿಂದಿಕ್ಕಿ ಕಾಪು ನಿಲ್ದಾಣದಲ್ಲಿದ್ದ ಪ್ರಯಾಣಿಕರನ್ನು ಕರೆದೊಯ್ಯಲು ಆಕ್ಷೇಪಿಸಿದೆ.
ಎಕೆಎಂಎಸ್ ಬಸ್ ಸಿಬ್ಬಂದಿ ಚಾಲಕ ಇರ್ಷಾದ್ ಹಾಗೂ ನಿರ್ವಾಹಕ ಪವನ್, ಕೊಹಿನೂರ್ ಬಸ್ ಚಾಲಕನ ಬಳಿ ಹೋಗಿ ರಾಡ್ನಿಂದ ಬಸ್ಗೆ ಹೊಡೆದಿದ್ದಾರೆ. ಕೊಹಿನೂರ್ ಬಸ್ನ ನಿರ್ವಾಹಕನಿಗೆ ಹೊಡೆಯಲು ಬಂದ ವೇಳೆ ಕೈಯಲ್ಲಿ ರಾಡ್ ಹಿಡಿದಿದ್ದ ವ್ಯಕ್ತಿಯನ್ನು ಜಲೀನ್ ಎಂದು ಗುರುತಿಸಲಾಗಿದೆ.
ಎರಡು ಬಸ್ ಸಿಬ್ಬಂದಿಗಳ ನಡುವೆ ಟೈಮಿಂಗ್ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಕೊಹಿನೂರ್ ಬಸ್ ಚಾಲ ಸಫಿಯುಲ್ಲಾ ದೂರು ದಾಖಲಿಸಿದ್ದಾರೆ.