ಬೈಂದೂರು, ಜ.11 (DaijiworldNews/PY): ಲಾರಿ ಉರುಳಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಸಾವನ್ನಪ್ಪಿದ ಘಟನೆ ಜ.10ರ ರವಿವಾರ ಬೈಂದೂರು ಸಮೀಪದ ಒತ್ತಿನೆಣೆ ಬಳಿ ನಡೆದಿದೆ.
ಮೃತರನ್ನು ಲಾರಿ ಚಾಲಕ ರಾಮ್ಪ್ರಸಾದ್ ಪವಾರ್ (35) ಎಂದು ಗುರುತಿಸಲಾಗಿದೆ.
ಲಾರಿಯಲ್ಲಿದ್ದ ಮತ್ತೋರ್ವನೂ ಗಾಯಗೊಂಡಿದ್ದು, ಅವರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಕಾರಿಗೆ ವ್ಯಾಪಕ ಹಾನಿಯಾಗಿದೆ. ಆದರೆ, ಕಾರಿನ ಚಾಕಲ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.