Karavali
ಬಂಟ್ವಾಳ ತಾಲೂಕಿನಲ್ಲಿ ಯಾವ ಪಂಚಾಯತ್ ಗಳಲ್ಲಿ ಯಾರು ಗೆದ್ದಿದ್ದಾರೆ ಇಲ್ಲಿದೆ ವಿವರ
- Wed, Dec 30 2020 11:15:30 PM
-
ಬಂಟ್ವಾಳ , ಡಿ. 30 (DaijiworldNews/SM): ಬಂಟ್ವಾಳ ತಾಲೂಕಿನಲ್ಲಿ ಅತೀ ಹೆಚ್ಚು ಗ್ರಾ. ಪಂ.ಗಳಿದ್ದು, ಬಹುತೇಕ ಪಂಚಾಯತ್ ಗಳ ಫಲಿತಾಂಶ ಪ್ರಕಟಗೊಂಡಿದೆ. ಇನ್ನೂ ಕೂಡ ಕೆಲವು ಗ್ರಾ. ಪಂಚಾಯತ್ ಗಳ ಫಲಿತಾಂಶ ಹೊರಬೀಳಬೇಕಿದೆ. ಸದ್ಯ ಸಿಕ್ಕಿರುವ ಫಲಿತಾಂಶದ ಪ್ರಕಾರ ಬಿಜೆಪಿ ಬೆಂಬಲಿತರು ಹೆಚ್ಚಿನ ಪಂಚಾಯತ್ ಗಳಲ್ಲಿ ಗೆಲುವು ದಾಖಲಿಸಿಕೊಂಡಿದ್ದಾರೆ.
ರಾತ್ರಿ 11 ಗಂಟೆಯ ತನಕ ವಿಜೇತರಾದವರ ವಿವರ:ಮಾಣಿ ಗ್ರಾಮ ಪಂಚಾಯತ್:
ತೀವ್ರ ಕುತೂಹಲ ಕೆರಳಿಸಿದ್ದ ಮಾಣಿ ಗ್ರಾಮಪಂಚಾಯತ್ ನ 10 ಸ್ಥಾನಗಳ ಪೈಕಿ ಕಾಂಗ್ರೇಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ 8 ಮಂದಿ ಅಭ್ಯರ್ಥಿ ಗಳು ಜಯಗಳಿಸುವ ಮೂಲಕ ಕಾಂಗ್ರೇಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದೆ.
ಇಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಕುಮಾರ್ ಸ್ವತಃ ಚುನಾವಣೆಗೆ ಸ್ಪರ್ಧಿಸಿ ವಿಜಯ ಸಾಧಿಸಿದ್ದು, ಉಳಿದಂತೆ ಕಾಂಗ್ರೇಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ಇಬ್ರಾಹಿಂ ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ಸೀತಾ, ರಮಣಿ, ಬಾಲಕೃಷ್ಣ ಆಳ್ವ, ಪ್ರೀತಿ ಪಿರೇರಾ, ಸುಜಾತ ಗೆಲುವು ಸಾಧಿಸಿದ್ದು, ಬಿಜೆಪಿ ಬೆಂಬಲಿತ ಪೈಕಿ ನಾರಾಯಣ ಶೆಟ್ಟಿ ಕೊಂಬಿಲ ಹಾಗೂ ಮಿತ್ರಾಕ್ಷಿ ಗೆಲುವು ಸಾಧಿಸಿದ್ದಾರೆ. ಕಳೆದ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೇಸ್ ಹಾಗೂ ಬಿಜೆಪಿ ತಲಾ 5 ಸ್ಥಾನಗಳನ್ನು ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಅದೃಷ್ಟಚೀಟಿಯ ಮೂಲಕ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಿತ್ತು. ಈ ಬಾರಿ ಕಾಂಗ್ರೇಸ್ 8 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದೆ.
ಪಿಲಾತಬೆಟ್ಟು ಗ್ರಾಮ ಪಂಚಾಯತ್:ಪಿಲಾತಬೆಟ್ಟು ಗ್ರಾಮಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತರು ಜಯಭೇರಿ ಸಾಧಿಸಿದ್ದು, ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಲಕ್ಮೀನಾರಾಯಣ ಹೆಗ್ಡೆ, ಯೋಗೇಂದ್ರ, ಕಾಂತಪ್ಪ ಪೂಜಾರಿ, ಹರ್ಷಿಣಿ, ಶಾರದ ಜಯಗಳಿಸಿದ್ದಾರೆ. ಕಾಂಗ್ರೇಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ನೆಲ್ವಿ ಸ್ಟಾರ್, ಚಂದ್ರಲೇಖ, ಪುಷ್ಪಲತಾ, ವನಿತ ಜಯಸಾಧಿಸಿದ್ದಾರೆ.
ಕರಿಯಂಗಳ ಗ್ರಾಮ ಪಂಚಾಯತ್:
ಕರಿಯಂಗಳ ಗ್ರಾಮ ಪಂಚಾಯತ್ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಒಟ್ಟು 12 ಸ್ಥಾನ ಗಳಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳು 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 3 ಸ್ಥಾನಗಳಲ್ಲಿ ಗೆಲುವು ಪಡೆದಿದ್ದಾರೆ.ಅದರಲ್ಲಿ ಒಂದು ಸ್ಥಾನ ಅವಿರೋಧವಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಚಂದ್ರಹಾಸ ಪಲ್ಲಿಪಾಡಿ, ರಾಜು ಜಿ.ಕೋಟದಯಾನ್, ರಾಜಲೋಕೇಶ್ ಪೂಜಾರಿ, ವೀಣಾ ಆಚಾರ್ಯ, ಲಕ್ಮೀಶ್ ಶೆಟ್ಟಿ, ಲತೀಫ್ ಕಲ್ಕುಟ, ಶಮೀರ್ ಗಾಣೆಮಾರ್, ನಾಗವೇಣಿ ಗೀತಾ ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಲೋಕೇಶ್ ಹಾಗೂ ಚಂದ್ರಾವತಿ ಹಾಗೂ ಗೀತಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.ಮಾಣಿಲ ಗ್ರಾಮ ಪಂಚಾಯತ್:
ಮಾಣಿಲ ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತರಿಗೆ ಅಧಿಕಾರ. ಒಟ್ಟು 8 ,ಸ್ಥಾನಗಳ ಪೈಕಿ 7 ಕಾಂಗ್ರೆಸ್ ಬೆಂಬಲಿತರ ಹಾಗೂ ಒಂದು ಬಿಜೆಪಿ ಪಾಲಿಗೆ. ಕಾಂಗ್ರೆಸ್ ಬೆಂಬಲಿ ಅಭ್ಯರ್ಥಿಗಳಾದ ರಾಜೇಶ್ ಬಾಳೆಕಲ್ಲು, ಶ್ರೀಧರ್ ಬಾಳೆಕಲ್ಲು, ವನಿತಾ ತಾರಿದಳ, ಚಂದ್ರಶೇಖರ ಪಕಳಕುಂಜ, ಗೀತಾ ಪಲ್ನೀರು, ಮಾಲತಿ ಎಂ.ಕೆ ಗೆಲುವು ಸಾಧಿಸಿದರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಶೋಭಾ ಅವರು ಗೆಲುವು ಸಾಧಿಸಿದ್ದಾರೆ. ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ರಾಜೇಶ್ ಬಾಲೆಕಲ್ಲು ಅವರು ಎರಡು ಕಡೆ ಸ್ಪರ್ಧೆ ಮಾಡಿ ಎರಡು ಗ್ರಾ.ಪಂ.ನಲ್ಲೂ ಗೆಲುವು ಸಾಧಿಸಿದ್ದಾರೆ.ರಾಯಿ ಗ್ರಾ.ಪಂಚಾಯತ್:
ರಾಯಿ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಒಟ್ಟು 12 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತ 11 ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, 1 ಸ್ಥಾನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಾಲಿಗೆ ದಕ್ಕಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಯಶೋಧ, ಸಂತೋ಼ಷ್, ಸಂತೋಷ ರಾಯಿಬೆಟ್ಟು, ಸುರೇಶ್, ರತ್ನಾ, ರಶ್ಮಿತ್ ಶೆಟ್ಟಿ, ರವೀಂದ್ರ ಪೂಜಾರಿ ಬದನಾಡಿ, ಪುಷ್ಪಾವತಿ , ಗುಣವತಿ, ದಿನೇಶ್ ಶೆಟ್ಟಿ ಅವರು ವಿಜಯ ಸಾಧಿಸಿದ್ದಾರೆ. ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಶೋಭಾ ಗೆಲುವು ಸಾಧಿಸಿದ್ದಾರೆ.ಸಂಗಬೆಟ್ಟು ಗ್ರಾ.ಪಂಚಾಯತ್:
ಸಂಗಬೆಟ್ಟು ಗ್ರಾ.ಪಂ.ನಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ. ಒಟ್ಟು 15. ಸ್ಥಾನಗಳ ಪೈಕಿ 13 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಕಾಂಗ್ರೇಸ್ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸತೀಶ್ ಪೂಜಾರಿ, ಸಂದೇಶ್ ಶೆಟ್ಟಿ, ಉದಯ ಪೂಜಾರಿ, ಸುರೇಶ್ ಕುಲಾಲ್, ಸುನಿಲ್ ಶೆಟ್ಟಿಗಾರ್, ಪ್ರೇಮ ಬಿ, ವಿದ್ಯಾಆಶೋಕ್ ಪ್ರಭು, ಹೇಮಲತಾ, ರಾಜೀವಿ, ದಾಮೋದರ ಪೂಜಾರಿ, ವಿಮಲಮೋಹನ್, ಶಕುಂತಲಾ, ಶಾಂತ . ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಾದ ದೇವಪ್ಪ ಕರ್ಕೇರ, ಬೆನೆಡಿಕ್ಟ್ ಡಿ.ಕೋಸ್ತಾ ಅವರು ವಿಜಯಗಳಿಸಿದ್ದಾರೆ.ವಿಟ್ಲ ಮೂಡ್ನೂರು ಗ್ರಾಮಪಂಚಾಯತ್
ವಿಟ್ಲ ಮೂಡ್ನೂರು ಗ್ರಾಮಪಂಚಾಯತ್ ನಲ್ಲಿ ಬೆಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸ್ಥಾನ ಗಳಿಸಿದ್ದಾರೆ. ಒಟ್ಟು 15 ಸ್ಥಾನಗಳ ಪೈಕಿ 13 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿ ಉಳಿದಂತೆ 3 ಸ್ಥಾನಗಳನ್ನು ಎಸ್.ಡಿ.ಪಿ.ಪಡೆದುಕೊಂಡಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಉಮೇಶ್, ಚಂದ್ರಾವತಿ, ರೋಹಿಣಿ , ಜಯಪ್ರಕಾಶ್, ಲೋಕೇಶ್, ಭಾರತಿ, ಮಹಾಬಲೇಶ್ವರ ಭಟ್, ಪುನೀತ್ ಎಮ್, ಹೇಮಲತಾ ಗೆಲುವು ಸಾಧಿಸಿದ್ದಾರೆ. ಎಸ್.ಡಿ.ಪಿ.ಐ. ಬೆಂಬಲಿತ ಅಭ್ಯರ್ಥಿಗಳಾದ ಸಿದ್ದೀಕ್,ಮರಿಯಮ್ಮ, ಶಾಬೀರರಿಯಾಜ್ ಅವರು ಗೆಲುವು ಸಾಧಿಸಿದ್ದಾರೆ.ಮೇರೆಮಜಲು ಗ್ರಾ. ಪಂಚಾಯತ್
ಮೇರೆಮಜಲು 7 ಬಿಜೆಪಿ ಬೆಂಬಲಿತರು, 5 ಸ್ಥಾನ ಕಾಂಗ್ರೆಸ್ ಬೆಂಬಲಿತರ ಪಾಲಿಗೆ. ಮೇರಮಜಲು ಗ್ರಾ.ಪಂ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಸತೀಶ್ ನಾಯ್ಕ್, ಸವಿತಾ ಮೋಹನ್, ಪದ್ಮನಾಭ ಶೆಟ್ಟಿ, ಹರಿಣಾಕ್ಷಿ, ವಿಮಲಾ ನಾಯ್ಕ್(ಅವಿರೋಧ), ಜಯಶ್ರೀ ಕರ್ಕೇರಾ, ಚೆನ್ನಮ್ಮ, ಅನಿಲ್ ಫರ್ನಾಂಡೀಸ್, ಫ್ರಾನ್ಸಿಸ್ ಮೆಂಡೊನ್ಸಾ, ವೃಂದಾ, ಸುಗಂಧಿ, ಅಶೋಕ್
ಅನಂತಾಡಿ ಗ್ರಾಮ ಪಂಚಾಯತ್
ಅನಂತಾಡಿ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ. ಒಟ್ಟು 7 ಸ್ಥಾನಗಳ ಪೈಕಿ 6 ಸ್ಥಾನಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪಡೆದು ಕೊಂಡಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸಂಧ್ಯಾ, ಗಣೇಶ್ ಪೂಜಾರಿ, ಕುಸುಮಾಧರ ಗೌಡ, ಸುಜಾತ, ರಶ್ಮಿ, ಮಮತಾ ಕೆ.ಹಾಗೂ ಸ್ವತಂತ್ರ ಅಭ್ಯರ್ಥಿ ಪುರಂದರ ಗೌಡ ಗೆಲುವು ಸಾಧಿಸಿದ್ದಾರೆ.ಪೆರಾಜೆ ಗ್ರಾಮ ಪಂ.ನಲ್ಲಿ ಸಮಬಲ
ಪೆರಾಜೆ ಗ್ರಾಮ ಪಂ.ನಲ್ಲಿ ಸಮಬಲ ಸಾಧಿಸಿದ ಕಾಂಗ್ರೇಸ್, ಬಿಜೆಪಿ ಬೆಂಬಲಿಗರು.
ಒಟ್ಟು ಎಂಟು ಸ್ಥಾನಗಳ ಪೈಕಿ ಕಾಂಗ್ರೇಸ್ ಮತ್ತು ಬಿಜೆಪಿ ಸಮಬಲ ಸಾಧಿಸಿದೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಹರೀಶ್ ರೈ ಪಾಣೂರು, ಮಮತ ತಿಲಕ್ ಗೌಡ, ರಾಜಾರಾಮ ಕಾಡೂರು, ಶಶಿಕಲಾ ವಿಜಯ ಸಾಧಿಸಿದ್ದಾರೆ.
ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಾದ ಕುಶಲ ಎಂ, ಎಸ್. ಉಮ್ಮರ್ , ಸುನೀತಾ, ರೋಹಿಣಿ ಗೆಲುವು ಸಾಧಿಸಿದ್ದಾರೆ.
ನಾವೂರು ಗ್ರಾಮಪಂಚಾಯತ್
ನಾವೂರು ಗ್ರಾಮಪಂಚಾಯತ್ ನಲ್ಲಿ ಕಾಂಗ್ರೇಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ಸುವರ್ಣ ಕುಮಾರ್ ಜೈನ್ ಹಾಗೂ ತ್ರಿಶಲ ಸುವರ್ಣ ಜೈನ್ ದಂಪತಿ ಗೆಲುವಿನ ನಗೆ ಬೀರಿದ್ದಾರೆ.
ಇಲ್ಲಿನ ನಾವೂರು ವಾರ್ಡ್ ನಲ್ಲಿ ಸುವರ್ಣ ಕುಮಾರ್ ಜೈನ್ ಸ್ಪರ್ಧಿಸಿದ್ದು, ದೇವಸ್ಯ ವಾರ್ಡ್ ನಲ್ಲಿ ಇವರ ಪತ್ನಿ ತ್ರಿಶಲ ಸುವರ್ಣ ಜೈನ್ ಸ್ಪರ್ಧಿಸಿದ್ದು ಈರ್ವರೂ ಗೆಲುವು ಸಾಧಿಸಿದ್ದಾರೆ. ನಾವೂರು ಗ್ರಾಮಪಂಚಾಯತ್ ನ 17 ಸ್ಥಾನಗಳ ಪೈಕಿ 10 ರಲ್ಲಿ ಕಾಂಗ್ರೇಸ್ ಬೆಂಬಲಿತರು ಗೆಲುವು ಸಾಧಿಸಿದ್ದು, ಬಿಜೆಪಿ ಬೆಂಬಲಿತರು 7 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಈ ಮೂಲಕ ನಾವೂರು ಗ್ರಾಮಪಂಚಾಯತ್ ನಲ್ಲಿ ಕಾಂಗ್ರೇಸ್ ಅಧಿಕಾರಕ್ಕೇರಿದೆ. ಕಳೆದ ಬಾರಿ ನಾವೂರು ಗ್ರಾಮಪಂಚಾಯತ್ ನಲ್ಲಿ 12 ಸ್ಥಾನಗಳಲ್ಲಿ ಬಿಜೆಪಿ ಹಾಗೂ 5 ಸ್ಥಾನಗಳಲ್ಲಿ ಕಾಂಗ್ರೇಸ್ ಜಯಗಳಿಸಿತ್ತು.ಕಾವಳಮೂಡೂರು ಗ್ರಾ.ಪಂಚಾಯತ್
ಕಾವಳಮೂಡೂರು ಗ್ರಾ.ಪಂ. ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ.
ಒಟ್ಟು 12 ಸ್ಥಾನ ಗಳ ಪೈಕಿ 8 ಬಿಜೆಪಿ ಬೆಂಬಲಿತ ಹಾಗೂ 2ಸ್ಥಾನಗಳಲ್ಲಿ ಕಾಂಗ್ರೆಸ್ ವ ಬೆಂಬಲಿತ ಹಾಗೂ 2 ಸ್ಥಾನಗಳಲ್ಲಿ ಎಸ್.ಡಿ.ಪಿ.ಐ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ
ರಾಜಗೋಪಾಲ್ ನಾಯಕ್, ಜಯಲಕ್ಷ್ಮೀ, ವೀಣಾ, ಅಜಿತ್ ಶೆಟ್ಟಿ, ಗಣೇಶ್ ದೇವಾಡಿಗ, ಶೇಷಗಿರಿ ಪೂಜಾರಿ, ರೇವತಿ ಮಡಿವಾಳ, ಪ್ರಶಾಂತ್ ಶೆಟ್ಟಿ, ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿಗಳಾದ ಶೈನಾಜ್, ಸಫಾ ಸಲ್ಮಾ, ಹಾಗೂ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಾದ ಜಯಂತಿ, ಖಲೀಲ್ ಅಹ್ಮದ್ ಅವರು ವಿಜಯ ಸಾಧಿಸಿದ್ದಾರೆ.
ಕರೋಪಾಡಿ ಗ್ರಾಮ ಪಂಚಾಯತ್
ಕರೋಪಾಡಿ ಗ್ರಾಮ ಪಂಚಾಯತ್ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ.
ಒಟ್ಟು 16 ಸ್ಥಾನಗಳಲ್ಲಿ ಕಾಂಗ್ರೆಸ್ 10 ಮತ್ತು ಬಿಜೆಪಿ ಆರು ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಹತ್ಯೆಯಾದ ಜಲೀಲ್ ಕರೋಪಾಡಿ ಅವರ ಸಹೋದರ ಅನ್ವರ್ ಕರೋಪಾಡಿ ಜಯಗಳಿಸಿದ್ದಾರೆ.ಕಾಂಗ್ರೆಸ್ ನ ಅನ್ವರ್, ಗಂಗಮ್ಮ ಯಾನೆ ಗೀತಾ, ಮೈಮುನಾ, ಮಮತ, ಅಗ್ನೇಸ್ ಡಿ ಸೋಜ, ಚೆನ್ನಪ್ಪ ನಾಯ್ಕ, ಜೂಲಿಯಾನ್ ಮೊಂತೆರೊ, ವೀರ ಹೆರಣಿಕ ಡಿ ಸೋಜ, ಸೂರ್ಯಕಾಂತಿ, ಹಮೀದ್, ಬಿಜೆಪಿಯ ಅಶ್ವಥ್, ನಳಿನಾಕ್ಷಿ, ರಘುನಾಥ ಶೆಟ್ಟಿ, ಶಶಾಂಕ್, ಪ್ರಸನ್ನ, ಜಯರಾಮ ಅವರು ಜಯಗಳಿಸಿದ್ದಾರೆ.
ಪಜೀರು ಗ್ರಾ.ಪಂ.
ಪಜೀರು ಗ್ರಾ.ಪಂ.ಕಾಂಗ್ರೇಸ್ ಅಧಿಕಾರಕ್ಕೆ
ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಾದ
ಸೀತಾರಾಮ ಶೆಟ್ಟಿ, ಇಮ್ತಿಯಾಜ್, ಲತಾಹರಿಪ್ರಸದ್, ರಪೀಕ್, ಸೆವರಿನ್ ಡಿಸೋಜ, ಪ್ಲೋರಿನ್ ಡಿ.ಸೋಜ, ಭರತ್ ರಾಜ್ ಶೆಟ್ಟಿ, ಶೇಖರ್ ಬೀಜಗುರಿ, ಮಹಮ್ಮದ್ ಪಾನೆಲ, ಜೋಹರಾ ಬದ್ರುದ್ದೀನ್, ಮೇರಿಪೆರ್ನಾಂಡಿಸ್, ಮೀನಾಕ್ಷಿ,ಎಸ್.ಡಿ.ಪಿ.ಬೆಂಬಲಿತ ಅಭ್ಯರ್ಥಿಗಳಾದ
ಮಹಮ್ಮದ್ ಸಿರಾಜ್, ಮಹಮ್ಮದ್ ಸಫೀಕ್ , ಸುಮಯ್ಯ, ಸುನೀತಾ
ಉಳಿದಂತೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಸಂತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಳಿಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಅಧಿಕಾರಕ್ಕೆ
ಒಟ್ಟು 11 ಸ್ಥಾನ ಗಳ ಪೈಕಿ 7 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ 4 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸುರೇಶ್ ಮೈರ, ಚೇತನ್ ಊರದೊಟ್ಟು, ಚಿದಾನಂದ ರೈ ಕಕ್ಯ, ವಸಂತ ಸಾಲಿಯಾನ್ ರಾಮನಗರ, ರೇವತಿ ಮುದಲಾಡಿ, ಗುಲಾಬಿ ಮಾಡೋಡಿ, ಶಾರದ ಹಾಗೂ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಾದ ಸಂಜೀವ ಗೌಡ, ಕುಶಾಲಾಕ್ಷಿ, ರಕ್ಷಿತಾ ಆರ್, ಶಾಂತ ಅವರು ವಿಜಯ ಸಾಧಿಸಿದ್ದಾರೆ.
ಬಾಳ್ತಿಲ ಗ್ರಾಮ ಪಂಚಾಯತ್
ಬಾಳ್ತಿಲ ಗ್ರಾಮ ಪಂಚಾಯತ್ ಬಿಜೆಪಿ ಪಾಲಿಗೆ ದಕ್ಕಿದೆ.
ಒಟ್ಟು 16 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 16 ಸ್ಥಾನಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿದೆ .
ಅಶೋಕ್ ಗಣೇಶ್ ನಗರ, ಶಿವರಾಜ್, ಮಲ್ಲಿಕಾ, ಚೈತ್ರಾ, ಜ್ಯೋತಿ ಎಸ್. ಚಂದ್ರಶೇಖರ ಪೂಜಾರಿ,ಶೋಭಾ, ಬಿ.ಕೆ ಅಣ್ಣಿಪೂಜಾರಿ, ವಿಠಲನಾಯ್ಕ್,ಹಿರಣ್ ಮಯಿ ರಂಜಿನಿ, ಮಮತಾ, ಯತೀಶ್, ರಾಜೇಶ್, ಆನಂದ ಶೆಟ್ಟಿ, ಹರಿಣಾಕ್ಷಿ.ಸರಪಾಡಿ ಗ್ರಾ. ಪಂಚಾಯತ್
ಸರಪಾಡಿ ಆಡಳಿತ ಬಿಜೆಪಿ ಪಾಲಿಗೆ .
ಒಟ್ಟು 11 ಸ್ಥಾನ ಗಳ ಪೈಕಿ 6 ಬಿಜೆಪಿ ಬೆಂಬಲಿತ ಹಾಗೂ 5 ಕಾಂಗ್ರೆಸ್ ಬೆಂಬಲಿತ ಆಭ್ಯರ್ಥಿಗಳು ವಿಜಯ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಧನಂಜಯ ಶೆಟ್ಟಿ, ದಿನೇಶ್ ಗೌಡ, ಸೌಮ್ಯ, ಲೀಲಾವತಿ , ರಾಮಕೃಷ್ಣ ಮಯ್ಯ, ನಳಿನಿವಸಂತ ಹಾಗೂ
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ವಿನ್ಸೆಂಟ್ ಪಿಂಟೋ, ರೇಶ್ಮಾ ದಿವಾಕರ ಪೂಜಾರಿ, ಬಾಲಕೃಷ್ಣ ಪೂಜಾರಿ, ಕುಸುಮಚಂದ್ರಹಾಸ ನಾಯ್ಕ, ಜಯಶ್ರೀಜಯಪೂಜಾರಿ ಅವರು ಆಯ್ಕೆಯಾಗಿದ್ದಾರೆ.ಸಜಿಪನಡು ಗ್ರಾಮ ಪಂಚಾಯತ್
ಕುತೂಹಲ ಕೆರಳಿಸಿದ ಸಜಿಪನಡು ಫಲಿತಾಂಶಟಾಸ್ ಗೆದ್ದು ಗೆದ್ದ ಅಭ್ಯರ್ಥಿ, ಎಸ್.ಡಿ.ಪಿ.ಐ. 8, ಕಾಂಗ್ರೆಸ್ 4, ಬಿಜೆಪಿ 3
ಬಂಟ್ವಾಳ: ತಾಲೂಕಿನ ಸಜಿಪನಡು ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಕೊನೆ ಕ್ಷಣದ ವರೆಗೆ ಭಾರೀ ಕುತೂಹಲವನ್ನು ಕೆರಳಿಸಿ ಕೊನೆಗೆ ನಡೆದ ಟಾಸ್ ನಲ್ಲಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಬೆಳಗ್ಗೆ ಆರಂಭಗೊಂಡ ಮತ ಎಣಿಕೆ ಸಂಜೆ 6 ಗಂಟೆ ವೇಳೆಗೆ ಮುಕ್ತಾಯ ಗೊಂಡಿದ್ದು ಒಟ್ಟು 15 ಅಭ್ಯರ್ಥಿಗಳ ಪೈಕಿ 7 ಎಸ್.ಡಿ.ಪಿ.ಐ. ಅಭ್ಯರ್ಥಿಗಳು, 4 ಕಾಂಗ್ರೆಸ್ ಅಭ್ಯರ್ಥಿಗಳು, 3 ಬಿಜೆಪಿ ಅಭ್ಯರ್ಥಿಗಳು ವಿಜಯಿಯಾಗಿದ್ದರು. ಒಂದು ಅಭ್ಯರ್ಥಿಯ ಮತ ಎಣಿಕೆ ಬಾಕಿ ಆಗಿತ್ತು. 7 ಸ್ಥಾನಗಳಲ್ಲಿ ಗೆದ್ದ ಎಸ್.ಡಿ.ಪಿ.ಐ.ಗೆ ಅಧಿಕಾರ ಹಿಡಿಯಲು 1 ಸ್ಥಾನದ ಅಗತ್ಯ ಇತ್ತು.
ಗ್ರಾಮದ ನಾಲ್ಕನೇ ವಾರ್ಡ್ ನ ಎಸ್.ಡಿ.ಪಿ.ಐ. ಬೆಂಬಲಿತ ಅಭ್ಯರ್ಥಿ ಸುಲೈಮಾನ್ 462 ಮತಗಳನ್ನು ಪಡೆದರೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೋಮನಾಥ ಕೂಡಾ 462 ಮತಗಳನ್ನು ಪಡೆದು ಸಮಾ ಸಮಾ ಗೊಂಡಿದ್ದರು. ಹೀಗಾಗಿ ಟಾಸ್ ಹಾಕುವ ಮೂಲಕ ವಿಜಯ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದ್ದು ಚುನಾವಣಾ ಅಧಿಕಾರಿ ಹಾಕಿದ ಟಾಸ್ ನಲ್ಲಿ ಎಸ್.ಡಿ.ಪಿ.ಐ. ಅಭ್ಯರ್ಥಿ ಸುಲೈಮಾನ್ ವಿಜಯಿಯಾದರು.
ಬರಿಮಾರು ಗ್ರಾ.ಪಂಚಾಯತ್
ಬರಿಮಾರು ಗ್ರಾ.ಪಂ.ನಲ್ಲಿ ಬಿಜೆಪಿ ಅಭ್ಯರ್ಥಿಗಳು ಮೇಲುಗೈ.
ಒಟ್ಟು 8 ಸ್ಥಾನಗಳ ಪೈಕಿ ಬಿಜೆಪಿ 6 ಹಾಗೂ ಸ್ವತಂತ್ರ ಅಭ್ಯರ್ಥಿ ಎರಡು ಜನ ಆಯ್ಕೆಯಾಗಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಪುಷ್ಪ ಲತಾ, ಜಗದೀಶ್, ಶಶಿಕಲಾ, ಸದಾಶಿವ ಜಿ, ವನಿತಾ, ಶೃತಿ ಹಾಗೂ ಸ್ವತಂತ್ರ ಅಭ್ಯರ್ಥಿಗಳಾದ ಕೋಟಿ ಬಂಗೇರ ಹಾಗೂ ಹರಿಕೃಷ್ಣ ಅವರು ಗೆಲುವು ಸಾಧಿಸಿದರು.
ತುಂಬೆ ಗ್ರಾಮಪಂಚಾಯತ್
ತುಂಬೆ ಗ್ರಾಮಪಂಚಾಯತ್ ನ 16 ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು.
ಜಹೂರ್ ಅಹಮದ್, ಅಬ್ದುಲ್ಹಝೀಝ್, ಆತಿಕಾ ಬಾನು, ಜೆಸಿಂತಾ ಡಿಸೋಜ, ಮುನೀರಾ, ಕಾಂಗ್ರೇಸ್ ಬೆಂಬಲಿಗರಾದ ಮಹಮ್ಮದ್ ವಳವೂರು, ಗಣೇಶ್ ಸಾಲಿಯಾನ್, ಇಬ್ರಾಹಿಂ,ಬಿಜೆಪಿ ಬೆಂಬಲಿಗರಾದ ಕಿಶೋರ್ ಜಯಂತಿ, ಮುನೀರಾ, ಅರುಣಾ ಗಾಣದಲಚ್ಚಿಲ್, ಹೇಮಾವತಿ , ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಪ್ರವೀಣ್ ತುಂಬೆ, ಶಶಿಕಲಾ ಕೊಟ್ಟಾರಿ ವಿಜೇತರಾಗಿದ್ದು, ಯಾವ ಪಕ್ಷದ ಬೆಂಬಲದೊಂದಿಗೆ ಯಾರು ಅಧಿಕಾರಕ್ಕೆ ಬರಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಪಂಜಿಕಲ್ಲು ಗ್ರಾ. ಪಂ.
ಪಂಜಿಕಲ್ಲು ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ವಿಜಯ.
ಒಟ್ಟು 16 ಕ್ಷೇತ್ರದಲ್ಲಿ 16 ಸ್ಥಾನಗಳು ಬಿಜೆಪಿ ಪಾಲಿಗೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಶಶಿಕಲ ಕೇಶವ, ಬಾಲಕೃಷ್ಣ ಪೂಜಾರಿ, ನಳಿನಿ ಪ್ರಸಾದ್, ಮೋಹನ್ ದಾಸ್, ಹರೀಶ್ ಪೂಜಾರಿ, ಲಕ್ಮೀನಾರಾಯಣ ಗೌಡ, ವಿಕೇಶ, ಜಯಶ್ರೀ, ಶೋಭಾ, ಚಂದ್ರಾವತಿ, ಸುಜಾತ, ಸಂಜೀವ ಪೂಜಾರಿ, ಚಿತ್ರಾಕ್ಷಿ, ಪೂವಪ್ಪ ಮೆಂಡನ್, ಗೋಪಾಲ ಕುಲಾಲ್, ರೂಪಶ್ರೀ ಅವರು ಆಯ್ಕೆಯಾಗಿದ್ದಾರೆ.ಅಳಿಕೆ ಗ್ರಾಮ ಪಂಚಾಯತ್
ಅಳಿಕೆ ಗ್ರಾಮ ಪಂಚಾಯತ್ ನಲ್ಲಿ ಒಟ್ಟು ೧೫ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಈ ಪೈಕಿ ೧೦ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹಾಗೂ ೫ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಪದ್ಮನಾಭ ಪೂಜಾರಿ ಸಣ್ಣಗುತ್ತ, ಸದಾಶಿವ ಶೆಟ್ಟಿ ಅಳಿಕೆ, ಸೀತಾರಾಮ ಶೆಟ್ಟಿ ಮುಳಿಯ, ರವೀಶ್ ಕೆ., ಜಗದೀಶ್ ಶೆಟ್ಟಿ ಮುಳಿಯ ಗುತ್ತು, ಸರಸ್ವತಿ ಚೆಂಡುಕ್ಕಳ, ಬಬಿತಾ ನಾರಾಯಣ ಜೆಡ್ಡು, ಸೆಲ್ವಿನ್ ಡಿಸೋಜಾ ನೆಕ್ಕಿತ ಪುಣಿ, ಸರೋಜಿನಿ ಕೇಕನಾಜೆ. ಶಾಂಬವಿ ಸುಧಾಕರ ಮಡಿಯಾಳ ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಬಲಿತ ಕಾನ ಈಶ್ವರ ಭಟ್, ಶಶಿಕಲ ಆನೆಪದವು, ಸುಕುಮಾರ ಮುಳಿಯ, ಗಿರಿಜ ಬಿಟ್ಟಿಮೂಲೆ, ಭಾಗಿರತಿ ಆಯ್ಕೆಯಾಗಿದ್ದಾರೆ.
ವೀರಕಂಭ ಗ್ರಾಮ ಪಂಚಾಯತ್
ವೀರಕಂಭ ಗ್ರಾಮ ಪಂಚಾಯತ್ ನಲ್ಲೂ ಸಮಬಲ.
ಒಟ್ಟು 14 ಸ್ಥಾನಗಳ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲ ಸಾಧಿಸಿದೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸಂದೀಪ್ ಪೂಜಾರಿ, ಜಯಪ್ರಸಾದ್ ಶೆಟ್ಟಿ, ದಿನೇಶ್ ಪೂಜಾರಿ, ಮೀನಾಕ್ಷಿ , ಜಯಂತಿ ಪೂಜಾರಿ, ಲಕ್ಮೀ, ಉಮಾವತಿ ದಾಮೋದರ ಸಪಲ್ಯ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ರಘು ಪೂಜಾರಿ, ನಿಶಾಂತ್ ರೈ, ಜನಾರ್ದನ ಬಾಯಿಲ, ಗೀತಾ, ಅಬ್ದುಲ್ ರಹಮಾನ್ ಎಸ್, ಲಲಿತ ವಿಜಯ ಹಾಗೂ ಶೀಲಾನಿರ್ಮಲ ವೇಗಸ್ ಸಾಧಿಸಿದ್ದಾರೆ.ಕುಕ್ಕಿಪಾಡಿ ಗ್ರಾಮ ಪಂಚಾಯತ್
ಕುಕ್ಕಿಪಾಡಿ ಗ್ರಾಮ ಪಂಚಾಯತ್ ಬಿಜೆಪಿ ಪಕ್ಷ ಮೇಲುಗೈ.
ಒಟ್ಟು 12 ಸ್ಥಾನಗಳ ಪೈಕಿ 11 ಸ್ಥಾನ ಗಳು ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದರೆ 1. ಸ್ಥಾನ ಕಾಂಗ್ರೆಸ್ ಬೆಂಬಲಿತ ಸ್ಥಾನ ಪಡೆದಿದೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಗೀತಾ, ಶೋಭಾ, ಶೇಖರ್ ಶೆಟ್ಟಿ, ಪ್ರತಿಭಾ ಶೆಟ್ಟಿ, ಪುಷ್ಪ, ಲಿಂಗಪ್ಪ ಪೂಜಾರಿ, ಯೋಗೀಶ್ ಆಚಾರ್ಯ, ಸುಜಾತ, ಬೇಬಿ, ಚಂದ್ರಪೂಜಾರಿ, ಪೂರ್ಣಿಮಾ ಹಾಗೂ ಕಾಂಗ್ರೆಸ್ ಬೆಂಬಲಿತ ದಿನೇಶ್ ಶಾಂತಿ ಗೆಲುವು ಸಾಧಿಸಿದರು.
ವಿಟ್ಲ ಪಡ್ನೂರು ಗ್ರಾ. ಪಂ.
ವಿಟ್ಲ ಪಡ್ನೂರು ಸಿಪಿಐ ಪಕ್ಷದ ಕೆ.ಎಚ್ ನೆಬಿಸ, ಎಸ್ ಡಿ ಪಿ ಐ ಮೊಹಮ್ಮದ್ ಕಡಂಬು, ಆಯಿಷಾ ಖಾದರ್,
ಎರಡು ಅವಿರೋಧಬಿಜೆಪಿ ಬೆಂಬಲಿತ ರವೀಶ್ ಶೆಟ್ಟಿ ಕರ್ಕಳ, ರೇಶ್ಮಾ ಶಂಕರಿ ಬಲಿಪಗುಳಿ, ನಾಗೇಶ್ ಶೆಟ್ಟಿ, ಪ್ರೇಮಲತಾ, ರೇಖಾ, ಅಮಿತಾ, ಹರಿಕಿಶೋರ್, ಜಯಲಕ್ಷ್ಮೀ, ಅವಿರೋಧವಾಗಿ ಜಯಂತ, ಜಯಭಾರತಿ,
ಕಾಂಗ್ರೆಸ್ ನ ಹರ್ಷದ್ ಕುಕ್ಕಿಲ, ಸಂದೇಶ್ ಶೆಟ್ಟಿ ಬಿಕ್ನಾಜೆ, ಶರೀಪ್ ಕೊಡಂಗೆ, ಲಕ್ಷ್ಮೀ
ಕನ್ಯಾನ ಗ್ರಾಮ ಪಂಚಾಯತ್
ಕನ್ಯಾನ ಗ್ರಾಮ ಪಂಚಾಯತ್ ನಲ್ಲಿ ಒಟ್ಟು 20 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ 14 ಹಾಗೂ ಬಿಜೆಪಿ ನಾಲ್ಕು ಬಿಜೆಪಿ ಬೆಂಬಲಿತರು ಗೆಲವು ಸಾಧಿಸಿದ್ದಾರೆ.ಇತ್ತೀಚಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ತಾಲೂಕು ಪಂಚಾಯತ್ ಸದಸ್ಯ ಕುಮಾರ್ ಭಟ್ ಬದಿಕೋಡಿ ಅವರು ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದು, ಸೋಲು ಅನುಭವಿಸಿದರು.
ಕಾಂಗ್ರೆಸ್ ಬೆಂಬಲಿತರಾದ ಅಬ್ದುಲ್ ರಹಿಮಾನ್, ರೇಖಾ ರಮೇಶ್, ಮಜೀದ್, ಗಣೇಶ್ ಭಟ್ ನೀರ್ಪಾಜೆ, ವೀಣಾ ನಝರೀನ್ ಡಿ ಸೋಜ, ನಳಿನಿ ದಯಾನಂದ, ಪಿಬಿ ಮೊಯಿದ್ದೀನ್, ಅನೀತಾ ಮೊಂತೆರೊ, ದೇವಕಿ, ಗ್ರೇಸಿ ಕ್ರಾಸ್ತ, ಮೊಹಿದ್ದೀನ್, ಕೃಷ್ಣ ನಾಯ್ಕ, ಬುಶ್ರಾ, ಸೆಲೆಸ್ಟಿನ್ ಡಿ ಸೋಜ ಹಾಗೂ ಬಿಜೆಪಿ ಬೆಂಬಲಿತರಾದ ಧರ್ನಮ್ಮ, ಮನೋಜ್, ರಘರಾಮ ಶೆಟ್ಟಿ, ನಾರಾಯಣ ಕುಸುಮಾ, ವನಿತಾ,
ಪೆರುವಾಯಿ ಗ್ರಾಮ ಪಂಚಾಯತ್
ಪೆರುವಾಯಿ ಗ್ರಾಮ ಪಂಚಾಯತ್ ಒಟ್ಟು ಎಂಟು ಸ್ಥಾನಗಳಲ್ಲಿ ಕಾಂಗ್ರೆಸ್ 5 ಮತ್ತು ಬಿಜೆಪಿ 3ಕಾಂಗ್ರೆಸ್ ಬೆಂಬಲಿತ ರಾಜೇಂದ್ರ ರೈ, ಬಾಲಕೃಷ್ಣ ಪೂಜಾರಿ ನಬಿಸ, ಮಾಲತಿ, ರಶ್ಮಿ, ಬಿಜೆಪಿ ಪಕ್ಷದ ವರುಣ್ ರೈ, ನಾರಾಯಣ ನಾಯ್ಕ್, ಲಲಿತಾ ಗೆಲುವು ಸಾಧಿಸಿದ್ದಾರೆ.