Karavali
ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ - ಉಡುಪಿ, ದ.ಕ. ಜಿಲ್ಲೆಯಲ್ಲಿ ಬಿಜೆಪಿ ಮೇಲುಗೈ
- Wed, Dec 30 2020 11:19:24 AM
-
ಮಂಗಳೂರು / ಉಡುಪಿ, ಡಿ. 30 (DaijiworldNews/MB) : ಎರಡು ಹಂತದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು ಹಲವು ಪ್ರದೇಶದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.
ಬೆಳಿಗ್ಗೆ 11 ಗಂಟೆಯವರೆಗೆ ಉಡುಪಿ ಜಿಲ್ಲೆಯಲ್ಲಿ 14 ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು 24 ಬಿಜೆಪಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಈಗಾಗಲೇ 126 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೊನಾಜೆ ನಾಲ್ಕನೇ ವಾರ್ಡ್, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೊಹಮ್ಮದ್ ಇಕ್ಬಾಲ್ ಚುನಾವಣೆಯಲ್ಲಿ ಗೆದ್ದಿದ್ದಾರೆ.
ಎಸ್ಡಿಪಿಐ ತನ್ನ ಖಾತೆಯನ್ನು ಹರೇಕಳ ಗ್ರಾಮ ಪಂಚಾಯಿತಿಯಲ್ಲಿ ತೆರೆದಿದೆ.
ತಲಪಾಡಿ ಗ್ರಾಮ ಪಂಚಾಯಿತಿಯ 2 ವಾರ್ಡ್ನಲ್ಲಿ ಜಹೀರ್ ಮತ್ತು ಮೂರನೇ ವಾರ್ಡ್ನಲ್ಲಿ ಮೊಹಮ್ಮದ್ ಚುನಾವಣೆಯಲ್ಲಿ ಜಯಗಳಿಸಿದರು.
ಎಸ್ಡಿಪಿಐ ತಲಪಾಡಿಯಲ್ಲಿ ತನ್ನ ಖಾತೆಯನ್ನು ತೆರೆದಿದೆ.
ಕಲ್ಯಾಣಪುರ ಗ್ರಾಮ ಪಂಚಾಯಿತಿಯಲ್ಲಿ ವಿಶುಕುಮಾರ್ ಮತ್ತು ರತ್ನ ಕೆ ಉಚ್ಚಿಲ ಜಯಗಳಿಸಿದರು.
ಕೊಡಿಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ಯಶೋಧಾ 375 ಮತಗಳೊಂದಿಗೆ, ವಿನಯ್ ಕುಮಾರ್ 396 ಮತಗಳೊಂದಿಗೆ ಜಯಗಳಿಸಿದ್ದಾರೆ.
ಕಡೆಕಾರ್ ಗ್ರಾಮ ಪಂಚಾಯಿತಿಯಲ್ಲಿ, ಕಾಂಗ್ರೆಸ್ ಅಭ್ಯರ್ಥಿಗಳಾದ ತಾರನಾಥ್, ಲೀಲಾವತಿ, ಸುಕನ್ಯಾ, ಇಂದಿರಾ ಶೆಟ್ಟಿ, ರಮೇಶ್ ಕೋಟಿಯನ್ ಅವರು ಚುನಾವಣೆಯಲ್ಲಿ ಜಯಗಳಿಸಿದ್ದಾರೆ.
ಬೆಳ್ಳಂಪಲ್ಲಿ ಗ್ರಾಮ ಪಂಚಾಯಿತಿಯಲ್ಲಿ ದಯಾನಂದ್ ಮತ್ತು ಉಷಾ ಚುನಾವಣೆಯಲ್ಲಿ ಜಯಗಳಿಸಿದರು.
ಅಂಜಾರುವಿನಲ್ಲಿ ಇಂದಿರಾ ಪೂಜಾರಿ 279 ಮತ ಗಳಿಸಿ ಚುನಾವಣೆಯಲ್ಲಿ ಜಯಗಳಿಸಿದರು. ಸಂದೀಪ್ ಕುಮಾರ್ 412 ಮತಗಳಿಂದ ಚುನಾವಣೆಯಲ್ಲಿ ಜಯಗಳಿಸಿದರು
ಕುಕ್ಕೆಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಉಷಾ 311 ಮತಗಳಿಂದ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ.
ಪಾವೂರು ಗ್ರಾಮ ಪಂಚಾಯತ್ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರತಿಕಲಾ ಮತ್ತು ರಿಯಾಜ್ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಾರೆ.
ಅಂಬ್ಲಮೊಗರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಕುಕ್ಯಾನ್ ಮತ್ತು ಬಿಜೆಪಿ ಬೆಂಬಲಿತ ಶ್ವೇತಾ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು, ದಯಾನಂದ, ಮಮತಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಕಾಂಗ್ರೆಸ್ಸಿನ ಮುಮ್ತಾಜ್ ಅವರು ಅಂಬ್ಲಮೊಗರಿನಲ್ಲಿ ಜಯ ಸಾಧಿಸಿದ್ದಾರೆ.
ಕುರ್ಕಾಲು ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಪ್ರವೀಣ್ ಕುಮಾರ್ ಮತ್ತು ಮಲ್ಲಿಕಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದಾರೆ.
ಪಾಲಿಮಾರು ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹೇಶ್ ಶೆಟ್ಟಿ ಮತ್ತು ರಶ್ಮಿ ಚುನಾವಣೆಯಲ್ಲಿ ಜಯಿಸಿದ್ದಾರೆ.
ಎಲ್ಲೂರಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಉಷಾ ರಾವ್ ಮತ್ತು ರವಿರಾಜ್ ಚುನಾವಣೆಯಲ್ಲಿ ಜಯಗಳಿಸಿದರು.
ಕೊಡಿಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ, ಬಿಜೆಪಿ ಬೆಂಬಲಿತ ನಾಲ್ಕು ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದರು.
ಎರ್ಮಾಲ್ ಬಡಾದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಇಂದಿರಾ ಎಸ್ ಶೆಟ್ಟಿ ಮತ್ತು ದೀಪಕ್ ಚುನಾವಣೆಯಲ್ಲಿ ಜಯಗಳಿಸಿದರು.
ಮಜೂರಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಧುಸೂಧನ್ ಸಾಲ್ಯಾನ್ ಹಾಗೂ ವನಿತಾ ಚುನಾವಣೆಯಲ್ಲಿ ಜಯಗಳಿಸಿದರು.
ಕೋಟೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಮೀಳಾ ಪ್ರಶಾಂತ್ ಜತ್ತಣ್ಣ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ರತ್ನಾಕರ್ ಕೋಟ್ಯಾನ್ ಚುನಾವಣೆಯಲ್ಲಿ ಗೆದ್ದರು.
ಕುಕ್ಕೇಹಳ್ಳಿಯಲ್ಲಿ ನಡೆದ ಚುನಾವಣೆಯಲ್ಲಿ ಇಬ್ಬರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಉಷಾ ಮತ್ತು ಜಯಾನಂದ್ ನಾಯಕ್ ಜಯಗಳಿಸಿದರು.
ಹೆಜ್ಜಾಡಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮೋಹನ್ ಸುರ್ವಣ ಮತ್ತು ಸುವಿನಾ ಫುರ್ಟಾಡೊ ಚುನಾವಣೆಯಲ್ಲಿ ಜಯಗಳಿಸಿದರು.
ಶಿರ್ವಾ ಮಾಣಿಬೆಟ್ಟುವಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುರೇಶ್ ನಾಯಕ್ ಮತ್ತು ಮಮತಾ ಶೆಟ್ಟಿ ಮತದಾನದಲ್ಲಿ ಜಯಗಳಿಸಿದರು.
ಪಡುಬಿದ್ರಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಶೋಭಾ ಶೆಟ್ಟಿ, ಸಂದೇಶ್ ಕುಮಾರ್ ಮತ್ತು ಜಯಲಕ್ಷ್ಮಿ ಚುನಾವಣೆಯಲ್ಲಿ ಜಯಗಳಿಸಿದರು.
ಪಡುತೋನ್ಸೆ ಪಂಚಾಯತ್ ಬೆಂಗ್ರೆ ವಾರ್ಡ್ ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ದೀರೇಂದ್ರ ಅವರು 337 ಮತಗಳಲ್ಲಿ ಹಾಗೂ ಲೋಕೇಶ್ 367 ಮತಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಬೆಂಬಲಿತ ಪ್ರತಿಭಾ ಬಾಸ್ಕರ್ ಸರ್ವಾನುಮತದಿಂದ ಚುನಾಯಿತರಾಗಿದ್ದಾರೆ. ಬಿಜೆಪಿ 3 ಸ್ಥಾನಗಳನ್ನು, ಕಾಂಗ್ರೆಸ್ 2 ಸ್ಥಾನಗಳನ್ನು ಪಡೆದುಕೊಂಡು ಜಯ ಗಳಿಸಿದ್ದಾರೆ.
ಉಡುಪಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಭಾತ್ ಕುಮಾರ್ ಅವರು ಚುನಾವಣೆಯಲ್ಲಿ 290 ಮತಗಳನ್ನು ಗಳಿಸಿ ಜಯ ಸಾಧಿಸಿದ್ದಾರೆ.
ಬ್ರಹ್ಮಾವರ ಯಡ್ತಡಿ ವಾರ್ಡ್ನಲ್ಲಿ ಸ್ವತಂತ್ರ ಅಭ್ಯರ್ಥಿ ಲೋಕೇಶ್ 80 ಮತಗಳಿಂದ ಜಯಗಳಿಸಿದರು.
ಸುಳ್ಯದ ಅಜ್ಜಾವರ ವಾರ್ಡಿನಲ್ಲಿ ಎರಡು ಕಡೆ ಬಿಜೆಪಿ ಹಾಗೂ ಬಳ್ಪ (ಪಂಜ) ಸಂಸದರ ಆದರ್ಶ ಗ್ರಾಮ 2 ಸ್ಥಾನ ಕಾಂಗ್ರೆಸ್ ವಶವಾಗಿದೆ.
ಉದ್ಯಾವರ ಗ್ರಾಮ ಪಂಚಾಯಿತಿನಲ್ಲಿ ನಡೆದ ಚುನಾವಣೆಯಲ್ಲಿ ಇಬ್ಬರು ಕಾಂಗ್ರೆಸ್ ಮತ್ತು ಇಬ್ಬರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಅಂಜರ್ ಸಂದೀಪ್ ಮತ್ತು ವಿನಯ್ ಜಯಗಳಿಸಿದ್ದಾರೆ.
ಬಂಟ್ಬಾಳದ ಅಮುಂಜೆ ಗ್ರಾಮ ಪಂಚಾಯಿತಿಯಲ್ಲಿ ಕಾರ್ತಿಕ್ ಬಲ್ಲಾಲ್ ಜಯಗಳಿಸಿದರು.
ಬೆಳ್ತಂಗಡಿ ತಾಲ್ಲೂಕಿನ ಪದನಗಡಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ರಿಚರ್ಡ್ ಗೋವಸ್ ಹಾಗೂ ಗಾಯತ್ರಿ ಗೆಲುವು ಸಾಧಿಸಿದ್ದಾರೆ.
ಬೆಳಪು ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆಯಲ್ಲಿ ಪ್ರಕಾಶ್ ರಾವ್ 405 ಮತಗಳನ್ನು ಗಳಿಸಿ ವಿಜಯರಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಫರಿದಾ ಅವರು ಹೆಜಮಾಡಿ ಗ್ರಾಮ ಪಂಚಾಯಿತಿಯಲ್ಲಿ 359 ಮತಗಳನ್ನು ಗಳಿಸಿ ಜಯ ಗಳಿಸಿದ್ದಾರೆ.
ಬಡಗಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ಗಣಪತಿ ಕಾಮತ್ ಮತ್ತು ಲಕ್ಷ್ಮಿ ಗೆಲುವು ಸಾಧಿಸಿದ್ದಾರೆ. ಇವರಿಬ್ಬರೂ ಕೂಡಾ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು.
ಹರೇಕಳ ವಾರ್ಡ್ನಲ್ಲಿ ಕಾಂಗ್ರೆಸ್ ಬೆಂಬಲಿತ ಮೊಹಮ್ಮದ್ ಹನೀಫ್ ಹಾಗೂ ಕೊಣಾಜೆ ವಾರ್ಡ್ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೀತಾ ಚುನಾವಣೆಯಲ್ಲಿ ಜಯಗಳಿಸಿದರು. ಅಲ್ಲದೆ, ಎಸ್ಡಿಪಿಐ ಬೆಂಬಲಿತ ರೆಹನಾ ಮೊಹಮ್ಮದ್ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಕೇಳರಕಳ ಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ಅನುಷಾ ಮತ್ತು ಸುರೇಶ್ ಚುನಾವಣೆಯಲ್ಲಿ ಜಯಗಳಿಸಿದರು.