ಮಂಗಳೂರು, ಡಿ. 27 (DaijiworldNews/HR): ದಿವಂಗತ ಲಾರೆನ್ಸ್ ಮತ್ತು ಮೇರಿ ಮಥಿಯಾಸ್ ಅವರ ಸ್ಮರಣಾರ್ಥ ಅಶೋಕ್ನಗರ ಯುವಕ ಸಂಘದ ವತಿಯಿಂದ ಹಿರಿಯ ನಾಗರಿಕರಿಗೆ ಬೈಸಿಕಲ್, ವೈದ್ಯಕೀಯ ನೆರವು, ಹೊಲಿಗೆ ಯಂತ್ರಗಳು ಮತ್ತು ಬಟ್ಟೆಗಳನ್ನು ವಿತರಿಸುವ ಕಾರ್ಯಕ್ರಮ ಅಶೋಕ್ನಗರ ಉನ್ನತ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಎನ್ಆರ್ಐ ಉದ್ಯಮಿ ಮತ್ತುಮೆರಿಟ್ ಫ್ರೈಟ್ ಸಿಸ್ಟಮ್ಸ್ ವ್ಯವಸ್ಥಾಪಕ ನಿರ್ದೇಶಕ ಜೋಸೆಫ್ ಮಥಿಯಾಸ್, ಪ್ರಸಿದ್ಧ ಕೊಂಕಣಿ ಬರಹಗಾರ ಮತ್ತು ಪ್ರಕಾಶಕರಾದ ಹೆನ್ರಿ ಮೆಂಡೊಂಕಾ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದು, ಅಶೋಕ್ನಗರ ಯುವಕ ಸಂಘದ ಅಧ್ಯಕ್ಷ ಶಂಕರ್ ಎನ್ ಪೂಂಜ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ನಾಗರಿಕರಿಗೆ ನೆರವು ವಿತರಿಸಿ ಬಳಿಕ ಮಾತನಾಡಿದ ಜೋಸೆಫ್ ಮಥಿಯಾಸ್, " ಪ್ರತಿವರ್ಷ ಸ್ವಾತಂತ್ರ್ಯ ದಿನದಂದು ನಾವು ಈ ಕಾರ್ಯಕ್ರಮವನ್ನು ಆಯೋಜಿಸುತ್ತೇವೆ. ಆದರೆ ಈ ವರ್ಷ ಕೊರೊನಾ ಕಾರಣದಿಂದಾಗಿ ಡಿಸೆಂಬರ್ಗೆ ಮುಂದೂಡಬೇಕಾಯಿತು. ಹಿರಿಯರಿಕೆ ಸಹಾಯ ಹಸ್ತ ಚಾಚಿದ್ದು ಒಂದು ಉತ್ತಮ ಕೆಲಸವಾಗಿದ್ದು,ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಅಧ್ಯಕ್ಷ ಮತ್ತು ಅಶೋಕ್ನಗರ ಯುವಕ ಸಂಘದ ಸದಸ್ಯರಿಗೆ ಧನ್ಯವಾದಗಳು. ಈ ಸಂಘವು ಸಮಾಜಕ್ಕೆ ನಿಸ್ವಾರ್ಥ ಸೇವೆ ಮಾಡುವ ಮೂಲಕ ಅದ್ಭುತ ಕೆಲಸ ಮಾಡುತ್ತಿದೆ" ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಹೆನ್ರಿ ಮೆಂಡೊಂಕಾ, "ಯಶಸ್ವಿ ಉದ್ಯಮಿ, ಜೋಸೆಫ್ ಮಥಿಯಾಸ್ ಅವರು ಲೋಕೋಪಕಾರಿ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಆರ್ಥಿಕ ಸಹಾಯವನ್ನು ಕೋರಿ ತನ್ನನ್ನು ಸಂಪರ್ಕಿಸುವ ಯಾರನ್ನೂ ಅವರು ಎಂದಿಗೂ ತಿರಸ್ಕರಿಸುವುದಿಲ್ಲ. ಕೊರೊನಾದ ಮಧ್ಯೆಯು ಅಶೋಕ್ನಗರ ಯುವಕ ಸಂಘದ ಈ ವರ್ಷವೂ ನಿರ್ಗತಿಕರಿಗೆ ಸಹಾಯ ಮಾಡುವ ಉದ್ದೇಶವನ್ನು ಮುಂದುವರಿಸಿದ್ದು, ಇದೊಂದು ಉತ್ತಮ ಕೆಲಸವಾಗಿದೆ" ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಅಶೋಕ್ನಗರ ಯುವಕ ಸಂಘದ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಗೆದ್ದ ಜೈ ಭಾರತಿ ತರುಣ ವೃಂದ ಇದರ ಅಧ್ಯಕ್ಷರನ್ನು ಸನ್ಮಾನಿಸಿಸಲಾಯಿತು.
ಗೌರವಾಧ್ಯಕ್ಷ ಬಿ.ನಾಗೇಶ್ ಕರ್ಕೆರಾ, ಅಶೋಕ್ನಗರದ ಬಿಲ್ಲವ ಸಂಘದ ಅಧ್ಯಕ್ಷ ಬಿ ಹರಿಪ್ರಸಾದ್ ಉಪಸ್ಥಿತರಿದ್ದರು.