ಮಂಗಳೂರು, ಡಿ.15 (DaijiworldNews/HR): ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಅವರು ಅಪರಾಧ ತಡೆಗಟ್ಟುವ ಅಂಗವಾಗಿ ಮಾದಕವಸ್ತು ವಿರೋಧಿ ಅಭಿಯಾನಕ್ಕೆ ಮಂಗಳವಾರ ಆಯುಕ್ತರ ಕಚೇರಿಯಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, "ಸಾರ್ವಜನಿಕ ಮತ್ತು ಅಪರಾಧ ನಿಯಂತ್ರಣ ದೃಷ್ಟಿಕೋನದಿಂದ ಮಾದಕವಸ್ತು ವಿರೋಧಿ ಅಭಿಯಾನ ಬಹಳ ಮುಖ್ಯ. ವಿಧಿವಿಜ್ಞಾನ ತಜ್ಞ ಡಾ.ಮಹಾಬಲೇಶ್ ಶೆಟ್ಟಿ ಮತ್ತು ಇಬ್ಬರು ವೈದ್ಯರೊಂದಿಗೆ ಅವರ ತಂಡವು ಮೂರು ತಿಂಗಳ ಹಿಂದೆ ವೃದ್ಧ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಲು ನಮಗೆ ಸಹಾಯ ಮಾಡಿದೆ" ಎಂದರು.
''ಇನ್ನು ಇತ್ತೀಚೆಗೆ ನಾವು ರೌಡಿ ಮೆರವಣಿಗೆ ನಡೆಸಿ ಡ್ರಗ್ಸ್ ಚಟುವಟಿಕೆಯಲ್ಲಿ ತೊಡಗಿರುವವರ ಸುಧಾರಣೆಗೆ ಅವಕಾಶ ನೀಡಲಾಯಿತು. ಸುಧಾರಣಾ ವಿಧಾನಗಳಿಂದ ಅವರು ಸಾಮಾನ್ಯ ಜೀವನವನ್ನು ನಡೆಸಬಹುದು. ಅಪರಾಧವು ಮಾದಕವಸ್ತುಗಳ ಬಳಕೆಗೆ ಸಂಬಂಧಿಸಿದೆ. ಆದರೆ ಡ್ರಗ್ಸ್ ಪ್ರಭಾವದಿಂದ ಇನ್ನೂ ಹೆಚ್ಚಿನ ಅಪರಾಧಗಳು ನಡೆಯುತ್ತವೆ'' ಎಂದು ಹೇಳಿದ್ದಾರೆ.
ಫೋರೆನ್ಸಿಕ್ ಮತ್ತು ಟಾಕ್ಸಿಕಾಲಜಿಯ ಎಚ್ಒಡಿ ಡಾ.ಮಹಬಲೇಶ್ ಶೆಟ್ಟಿ ಮಾತನಾಡಿ, "ಡ್ರಗ್ಸ್ ಭೀತಿ ಇಲ್ಲದ ದೇಶವಿಲ್ಲ. ಇದಕ್ಕೆ ಕಾರಣವೆಂದರೆ 900 ರಿಂದ 950 ಬಿಲಿಯನ್ ಹಣ. ನಮ್ಮ ಜನಸಂಖ್ಯೆಯು 40 ಕೋಟಿ ಯುವಕರನ್ನು ಒಳಗೊಂಡಿದೆ. ಮದ್ಯಪಾನ ಮತ್ತು ತಂಬಾಕು ಕೂಡ ಒಂದು ರೀತಿಯ ಡ್ರಗ್ಸ್, ಇದು ಕಾನೂನುಬಾಹಿರವಾಗಿದೆ. ಅನೇಕ ಬಾರ್ ಮಾಲೀಕರು ನಿಜವಾದ ಡ್ರಗ್ಸ್ ಪೆಡ್ಲರ್ಗಳು. ಇನ್ನು ಡ್ರಗ್ಸ್ ನಿಯಂತ್ರಣದಿಂದ ನಡೆಯುವ ಅನೇಕ ಅಪಾಯಗಳನ್ನು ನಿಲ್ಲಿಸಬಹುದು" ಎಂದು ಹೇಳಿದ್ದಾರೆ.