ಕಾರ್ಕಳ, ಡಿ.15 (DaijiworldNews/HR): ಸಾಣೂರು ಸೇತುವೆ ಸಮೀಪದ ಮಂಗಳವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಕೇರಳ ನೊಂದಾವಣೆಯ ಕಾರೊಂದು ತೀವ್ರ ತರದಲ್ಲಿ ಜಖಂಗೊಂಡಿದೆ.
ಕಾರ್ಕಳದಿಂದ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಬೆಳುವಾಯಿ ಕಡೆಗೆ ಹೋಗುತ್ತಿದ್ದಾಗ ತಾಂತ್ರಿಕ ದೋಷಕ್ಕೊಳಗಾಗಿರುವುದು ಘಟನೆ ಕಾರಣವೆನ್ನಲಾಗಿದೆ.
ಕೇರಳದಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕಾರಿನ ಎದುರಿನ ಬಲಭಾಗ ಸಂಪೂರ್ಣ ಜಖಂಗೊಂಡಿದೆ.