ಮಂಗಳೂರು, ಡಿ.15 (DaijiworldNews/MB) : ದೇವಾಲಯಗಳು, ನಿವಾಸಗಳು ಮತ್ತು ವ್ಯಾಪಾರ ಕೇಂದ್ರಗಳಿಂದ ಕಳ್ಳತನ ಮಾಡಿದ ಇಬ್ಬರು ವ್ಯಕ್ತಿಗಳನ್ನು ಬಂಧಿಸುವಲ್ಲಿ ಮುಲ್ಕಿ ಠಾಣೆಯ ಪೊಲೀಸ್ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಸುಮಾರು ನಾಲ್ಕು ಲಕ್ಷ ರೂ.ಗಳ ವಸ್ತುಗಳನ್ನು ಅವರಿಂದ ವಶಕ್ಕೆ ಪಡೆದಿದ್ದಾರೆ.
ರಾಜೇಶ್ ನಾಯಕ್ ಅಲಿಯಾಸ್ ರಾಜು ಪಮುದಿ (42) ಹಾಗೂ ಪದ್ಮಾ ಪಮುದಿ (37) ಬಂಧಿತರು.
ದಂಪತಿಗಳು ಮಂಚಿ, ಮಣಿಪಾಲ ಮತ್ತು ಕರಾವಳಿ ಕರ್ನಾಟಕದ ಇತರ ಸ್ಥಳಗಳಲ್ಲಿ ವಾಸವಾಗಿದ್ದು ಈ ಸ್ಥಳಗಳಲ್ಲಿ ವಾಸವಿದ್ದ ಸಂದರ್ಭ ಕಳ್ಳತನದಲ್ಲಿ ತೊಡಗಿದ್ದರು. ಪೊಲೀಸರು ಅವರನ್ನು ಧಾರವಾಡದ ಜನತಾ ಕಾಲೋನಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇವರಿಬ್ಬರು ಮುಲ್ಕಿಯಲ್ಲಿರುವ ಸೋಮನಸುಂದರ್ ಅಂಚನ್ ಮತ್ತು ಹಸನಬ್ಬ ಅವರ ಮನೆಯಲ್ಲಿ, ಚರಂತಿ ಪೇಟೆ ಮುಲ್ಕಿಯ ಪ್ರಕಾಶ್ ಜ್ಯುವೆಲ್ಲರಿ, ಮಾರಿಯಮ್ಮ ದೇವಸ್ಥಾನ, ಮೂಕಾಂಬಿಕಾ ದೇವಸ್ಥಾನ ಮತ್ತು ಇತರ ಸ್ಥಳಗಳಿಂದ ಕಳ್ಳತನ ಮಾಡಿದ್ದಾರೆ ಎಂಬ ಆರೋಪವಿದೆ.
ಅವರಿಂದ ಸುಮಾರು 62 ಗ್ರಾಂ ಚಿನ್ನದ ಆಭರಣಗಳು, ಎರಡೂವರೆ ಕಿಲೋಗ್ರಾಂಗಳಷ್ಟು ಬೆಳ್ಳಿ ವಸ್ತುಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.