ಉಡುಪಿ, ಡಿ.15 (DaijiworldNews/MB) : 'ಸುವರ್ಣ ತ್ರಿಭುಜ' ಬೋಟ್ ದುರಂತದಲ್ಲಿ ನಾಪತ್ತೆಯಾದ ಏಳು ಮೀನುಗಾರರು ಹಾಗೂ ಆ ಬೋಟ್ ಬಗ್ಗೆ ದುರಂತ ನಡೆದು 2 ವರ್ಷವಾದರೂ ಇನ್ನೂ ಮಾಹಿತಿ ತಿಳಿದಿಲ್ಲ. ಬೋಟ್ ಏನಾಯಿತು ಹಾಗೂ ನಾಪತ್ತೆಯಾದ ಮೀನುಗಾರರು ಎಲ್ಲಿ ಎಂಬ ಬಗ್ಗೆ ಮಾಹಿತಿ ನೀಡುವ ಪುರಾವೆಗಳು ಲಭಿಸಿಲ್ಲ.
ನಾಪತ್ತೆಯಾದವರು ಜೀವಂತವಾಗಿದ್ದಾರೆ, ಹಿಂತಿರುಗಿ ಬರುತ್ತಾರೆ ಎಂಬ ಭರವಸೆಯಲ್ಲಿ ಕುಟುಂಬಸ್ಥರು ದಿನ ದೂಡುತ್ತಿದ್ದಾರೆ. ತಮ್ಮ ಕುಟುಂಬಗಳಿಗೆ ಬೆಂಬಲದ ಆಧಾರಸ್ತಂಭಗಳಾಗಿದ್ದ ಮೀನುಗಾರರನ್ನು ಪತ್ತೆ ಹಚ್ಚಿ ಮರಳಿ ಕರೆತರಬೇಕೆಂದು ಅವರು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.
2018 ರ ಡಿಸೆಂಬರ್ 13 ರಂದು ಮಲ್ಪೆ ಮೀನುಗಾರಿಕೆ ಬಂದರಿನಿಂದ ಸುವರ್ಣ ತ್ರಿಭುಜ ಎಂಬ ಬೋಟ್ ಹೊರಟ್ಟಿತ್ತು. ಡಿಸೆಂಬರ್ 15 ರ ಮಧ್ಯರಾತ್ರಿಯಿಂದ, ಆ ಬೋಟ್ನೊಂದಿಗೆ ಇದ್ದ ಎಲ್ಲಾ ಸಂಪರ್ಕಗಳು ಕಳೆದುಕೊಂಡಿತು. ಬಳಿಕ ಆ ಬೋಟ್ಗೆ ಏನಾಯಿತು ಎಂಬ ಬಗ್ಗೆ ತಿಳಿಯುವ ಪ್ರಯತ್ನ ಮಾಡಲಾಗಿದ್ದು ಎಲ್ಲಾ ಪ್ರಯತ್ನಗಳು ವ್ಯರ್ಥವಾಯಿತು.
ಸಾಕಷ್ಟು ಪ್ರಯತ್ನಗಳ ನಂತರ, ಮೇ 1 ರಂದು ಮಾಲ್ವಾನ್ ಸಮುದ್ರ ತೀರದಿಂದ ಸುಮಾರು 33 ಕಿ.ಮೀ ದೂರದಲ್ಲಿ 64 ಮೀಟರ್ ನೀರಿನ ಕೆಳಗೆ ಬೋಟ್ನ ಅವಶೇಷಗಳು ಪತ್ತೆಯಾಗಿವೆ. ಆದರೆ ಏಳು ಮೀನುಗಾರರಿಗೆ ಏನಾಯಿತು ಎಂಬುದರ ಬಗ್ಗೆ ಯಾವುದೇ ಸುಳಿವು ಇಲ್ಲ.
ಯಾವುದೋ ಒಂದು ಬೃಹತ್ ವಸ್ತು ಬೋಟ್ಗೆ ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ಲಭಿಸಿದ್ದರೂ, ಈ ಬಗ್ಗೆ ತನಿಖೆಯಲ್ಲಿ ಯಾವುದೇ ಮುನ್ನಡೆ ಸಾಧಿಸಿಲ್ಲ.
ಕಾಣೆಯಾದ ಮೀನುಗಾರರ ಕುಟುಂಬಸ್ಥರು ತಮ್ಮ ಆಪ್ತರು ನಾಪತ್ತೆಯಾದ ದುಃಖದಲ್ಲೇ ಇದ್ದಾರೆ. ತನ್ನ ಮಗನ ಬಗ್ಗೆ ಚಿಂತೆಗೀಡಾದ ದಾಮೋದರ್ ಸಾಲಿಯನ್ ಎಂಬವರ ತಂದೆ ಸುವರ್ಣ ತಿಂಗಾಳಯ ಕೊನೆಯುಸಿರೆಳೆದಿದ್ದಾರೆ. ಭಟ್ಕಳದ ರಮೇಶಿಯ ಸಹೋದರ ಚಂದ್ರಶೇಖರ್ ಆತ್ಮಹತ್ಯೆ ಮಾಡಿ ಪ್ರಾಣ ಕಳೆದುಕೊಂಡರು. ನಾಪತ್ತೆಯಾದವರ ಕುಟುಂಬಸ್ಥರು ನಾಪತ್ತೆಯಾದ ನಮ್ಮ ಕುಟುಂಬಸ್ಥ ಹಿಂದಿರುಗಿ ಬರುತ್ತಾನೆ ಎಂಬ ದಾರಿ ಕಾಯುತ್ತಿದ್ದಾರೆ.