ಉಡುಪಿ, ಡಿ. 14 (DaijiworldNews/SM): ಉಡುಪಿ ಜಿಲ್ಲಾಧಿಕಾರಿಗಳು ಬಿಜೆಪಿಯ ಶಾಸಕರ ತಾಳಕ್ಕೆ ತಕ್ಕಂತೆ ಕುಣಿಯುತಿದ್ದಾರೆ ಎಂಬುವುದಾಗಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮುದ್ರಾಡಿ ಆರೋಪಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಜಿಲ್ಲಾಧಿಕಾರಿಗಳಿಗೆ ಬಿಜೆಪಿ ಶಾಸಕರೊಂದಿಗೆ ಯಾವುದೇ ಸಂಬಂಧವಿದ್ದರೆ ಅವರು, ಅದನ್ನು ರಾಜಕೀಯವಾಗಿ ತೋರಿಸಬಾರದು. ಜಿಲ್ಲಾಧಿಕಾರಿಗಳು ದೈರ್ಯವಿದ್ದಲ್ಲಿ ಭ್ರಷ್ಟಾಚಾರವನ್ನು ಮಟ್ಟ ಹಾಕಲಿ ಎಂದುವುದಾಗಿ ಮುದ್ರಾಡಿ ಸವಾಲೆಸೆದಿದ್ದಾರೆ.
ಇನ್ನು ಎಣ್ಣೆಹೊಳೆ ಡ್ಯಾಂ ಬಗ್ಗೆ ನಾವು ಹಲವು ಹೋರಾಟಗಳನ್ನು ಮಾಡಿದ್ದೇವೆ. ಅಲ್ಲದೆ, ಜಿಲ್ಲಾಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಿದ್ದೇವೆ. ಈವರೆಗೂ ಅವರು ಅಲ್ಲಿಗೆ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳು ಪುರಸಭೆಯ ರಸ್ತೆಗಳಿಗೆ ಭೇಟಿ ನೀಡಿಲ್ಲ. ಒಮ್ಮೆ ಪುರಸಭೆ ರಸ್ತೆಗೆ ಭೇಟಿ ನೀಡಲಿ. ಆದರೆ, ಇದೀಗ ಚುನಾವಣೆ ಸಮಯದಲ್ಲಿ ರಸ್ತೆ ಕಾಮಾಗಾರಿ ನೋಡಲು ಬರುವುದು ಯಾಕೆ? ಎಂಬುವುದಾಗಿ ಅವರು ಪ್ರಶ್ನಿಸಿದ್ದಾರೆ.
ಇದೇ ರೀತಿ ಮುಂದುವರೆದರೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕುಳಿತುಕೊಳ್ಳುತ್ತೇವೆ ಎಂದು ಉಡುಪಿ ಡಿಸಿ ವಿರುದ್ದ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.