ಕಾರ್ಕಳ, ಡಿ.14 (DaijiworldNews/MB) : ಕಾರ್ಕಳಪಡುಬಿದ್ರಿ ರಾಜ್ಯ ಹೆದ್ದಾರಿಯ ಕುಂಟಲ್ಪಾಡಿ ಎಂಬಲ್ಲಿ ಸಂಭವಿಸಿದ ರಸ್ತೆ ಅಫಘಾತದಲ್ಲಿ ಬೈಕ್ ಸಹಸವಾರರಿಬ್ಬರು ಗಾಯಗೊಂಡಿದ್ದಾರೆ.
ಚೈತ್ರ ಹಾಗೂ ಸುಚಿತ್ ಘಟನೆಯಲ್ಲಿ ಗಾಯಾಳುಗಳು.
ಕೆಎ20ಇಕೆ 1674 ನೊಂದಾವಣೆ ಹೊಂದಿದ ಬೈಕ್ನಲ್ಲಿ ಇವರಿಬ್ಬರು ಕುಳಿರಿಸಿ ಕೊಂಡು ಕುಂಟಲ್ಪಾಡಿ ಕಡೆಗೆ ಹೋಗುತ್ತಿದ್ದಾಗ ರಸ್ತೆಗೆ ಅಡ್ಡವಾಗಿ ಹಾಕಲಾಗಿದ್ದ ರಸ್ತೆದಿಬ್ಬ ತಲುಪುತ್ತಿದ್ದಂತೆ ಹಿಂಬದಿಯಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸಹಸವಾರರಿಬ್ಬರು ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ ಎಂದು ಸಾಣೂರು ಬೀಜೋತ್ಪಾದನ ಕೇಂದ್ರದ ಬಳಿಯ ನಿವಾಸಿ ಸುಭಾಸ್ ಕಾರ್ಕಳ ನಗರದ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ಕೆ.ಎ19ಎಸಿ 6660 ನಂಬ್ರದ ಲಾರಿಯನ್ನು ಚಲಾಯಿಸಿದ ಚಾಲಕ ಅಲ್ಮಾನ್ ಬೇಗ್ ವಿರುದ್ಧ ಕೇಸು ದಾಖಲಾಗಿದೆ.