ಕಾಸರಗೋಡು, ಡಿ.14 (DaijiworldNews/MB) : ಬೂತ್ ಏಜೆಂಟ್ ಕುಸಿದು ಬಿದ್ದು ಮೃತಪಟ್ಟ ಘಟನೆ ಸೋಮವಾರ ತಳಂಗರೆಯಲ್ಲಿ ನಡೆದಿದೆ.
ಕಾಸರಗೋಡು ನಗರಸಭಾ ವ್ಯಾಪ್ತಿಯ ತಳಂಗರೆ 22 ನೇ ವಾರ್ಡ್ನ ಎಲ್ಡಿಎಫ್ ಬೂತ್ ಏಜೆಂಟ್, ಸಿಪಿಎಂ ಕಾರ್ಯಕರ್ತ ಅಪ್ಜಲ್ ಖಾನ್ (49) ಮೃತಪಟ್ಟವರು.
ತಳಂಗರೆ ಪಳ್ಳಿಕ್ಕಾಲ್ ಎಂ. ಎಲ್. ಪಿ ಶಾಲೆಯ ಮತಗಟ್ಟೆ ಬಳಿ ಕುಸಿದು ಬಿದ್ದಿದ್ದು, ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.