ಉಡುಪಿ, ಡಿ.14 (DaijiworldNews/MB) : ಸಾರಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ ನಡೆಸಿದ ಹಿನ್ನೆಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಯ ಹಲವಾರು ಬಸ್ಗಳು ಸೋಮವಾರ ಡಿಸೆಂಬರ್ 14 ರಂದು ಜಿಲ್ಲೆಯಲ್ಲಿ ರಸ್ತೆಗಿಳಿಯದೆ ಇದ್ದುದರಿಂದ ಬೆಳಿಗ್ಗೆಯಿಂದ ಕೇವಲ ಎರಡು ಬಸ್ಸುಗಳು ಉಡುಪಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಹೊರಟಿದೆ. ಒಂದು ಕಾರ್ಕಳ ಕಡೆಗೆ ಮತ್ತೊಂದು ಬಸ್ ಧರ್ಮಸ್ಥಳಕ್ಕೆ ತೆರಳಿದವು.
ಇಲ್ಲಿನ ಅಧಿಕಾರಿಗಳು ಶೀಘ್ರದಲ್ಲೇ ಸೇವೆಗಳನ್ನು ಪ್ರಾರಂಭಿಸುವ ಆಶಯದಲ್ಲಿದ್ದಾರೆ. ಮುಷ್ಕರದಿಂದಾಗಿ ಕಳೆದ ಕೆಲವು ದಿನಗಳಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕಡಿಮೆಯಿದ್ದರು. ಆದರೆ ಅನೇಕ ಪ್ರಯಾಣಿಕರು ಸಹ ಬಸ್ ನಿಲ್ದಾಣದಲ್ಲಿದ್ದಾರೆ.
ಖಾಸಗಿ ಬಸ್ ನಿರ್ವಾಹಕರು ಪ್ರಯಾಣಿಕರಿಗಾಗಿ ವಿಶೇಷ ಸೇವೆಯನ್ನು ಪ್ರಾರಂಭಿಸುತ್ತಿದ್ದಾರೆ. ಇತರ ದಿನಗಳಿಗೆ ಹೋಲಿಸಿದರೆ ಈ ಖಾಸಗಿ ಬಸ್ನ ವಿಶೇಷ ಸೇವೆಗಳ ಪ್ರಯಾಣ ದರವು ಅಧಿಕವಾಗಿದೆ.
ರವಿವಾರ, ಉಡುಪಿ ಜಿಲ್ಲೆಯಲ್ಲಿ ಭಾಗಶಃ ಮುಷ್ಕರದ ಪರಿಣಾಮ ಬೀರಿದೆ. ಉಡುಪಿ ಮತ್ತು ಕುಂದಾಪುರ ಡಿಪೋಗಳಿಂದ ಬಸ್ಗಳು ಇತರ ಜಿಲ್ಲೆಗಳಿಗೆ ತೆರಳಿದ್ದರೂ ಸಹ, ಬೇರೆ ಜಿಲ್ಲೆಗಳಿಂದ ಬರುವ ಬಸ್ಗಳ ಸಂಖ್ಯೆ ತೀರಾ ಕಡಿಮೆಯಾಗಿತ್ತು.
ಮಂಗಳೂರಿನಲ್ಲಿ ರವಿವಾರ ಬೆರಳೆಣಿಕೆಯಷ್ಟು ಬಸ್ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಇದರಿಂದಾಗಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಯಿತು.
ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಂತಹ ದೂರದ ಸ್ಥಳಗಳಿಂದ ಬಂದ ಬಸ್ಗಳ ಸಂಖ್ಯೆ ತೀರಾ ಕಡಿಮೆ ಇದ್ದುದರಿಂದ, ಇತರ ಜಿಲ್ಲೆಗಳಿಗೆ ಪ್ರಯಾಣಿಸಲು ಕೆಲವೇ ಬಸ್ಗಳು ಮಾತ್ರ ಇಂದು ಲಭ್ಯವಿವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯೊಳಗೆ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್ ಸೇವೆಗಳನ್ನು ನಡೆಸಲಾಯಿತು.
ಬಸ್ಗಳ ಲಭ್ಯತೆಯ ಬಗ್ಗೆ ಖಾತರಿ ಇಲ್ಲದ ಕಾರಣ ಹಲವಾರು ಪ್ರಯಾಣಿಕರು ತಮ್ಮ ಬುಕಿಂಗ್ ಅನ್ನು ರದ್ದುಪಡಿಸಿದ್ದಾರೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಇತರ ಜಿಲ್ಲೆಗಳಿಗೆ ತುರ್ತಾಗಿ ಪ್ರಯಾಣಿಸಲು ಬಯಸುವ ಕೆಲವು ಕುಟುಂಬಗಳು ಖಾಸಗಿ ಬಸ್ಸುಗಳನ್ನು ಬುಕ್ ಮಾಡಿದೆ ಎಂದು ತಿಳಿದುಬಂದಿದೆ. ನಗರದಿಂದ ಕಾಸರಗೋಡು ಮಾರ್ಗಕ್ಕೆ ಸಂಚರಿಸುವ ಬಸ್ಗಳು ಎಂದಿನಂತೆ ಚಲಿಸುತ್ತಿದೆ.
ಕೊರೊನಾ ಲಾಕ್ಡೌನ್ನಿಂದಲೇ ಸುಮಾರು ಒಂದು ವರ್ಷದಿಂದ ಕೆಎಸ್ಆರ್ಟಿಸಿ ಸಮಸ್ಯೆಯಲ್ಲಿ ಸಿಲುಕಿದೆ. ಲಾಕ್ಡೌನ್ ತೆರವಾದ ನಂತರವೂ ಮಂಗಳೂರಿನಲ್ಲಿ ದೈನಂದಿನ ಸಂಗ್ರಹವು ಹಿಂದಿನ 70 ಲಕ್ಷ ರೂ.ಗಳಿಂದ ದಿನಕ್ಕೆ 45 ಲಕ್ಷ ರೂ.ಗೆ ಇಳಿದಿತ್ತು. ಈಗ ಕೊಂಚ ಸುಧಾರಣೆಯಾಗುತ್ತಿರುವ ಅವಧಿಯಲ್ಲಿ ಸಂಗ್ರಹವು 20 ಲಕ್ಷ ರೂ.ಗೆ ಇಳಿಕೆ ಕಂಡಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತವು ಡಿಸೆಂಬರ್ 14 ರ ಸೋಮವಾರ ಖಾಸಗಿ ಬಸ್ ಮಾಲೀಕರು, ಸಿಟಿ ಬಸ್ ಮಾಲೀಕರು ಮತ್ತು ಕೆಎಸ್ಆರ್ಟಿಸಿ ಅಧಿಕಾರಿಗಳ ಸಭೆ ಕರೆದಿದೆ. ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ ಮಾತನಾಡಿ, ತಮ್ಮ ಬಸ್ಸುಗಳು ಸಾಮಾನ್ಯವಾಗಿ ಚಲಿಸುತ್ತಿವೆ. ನಾವು ಕೆಎಸ್ಆರ್ಟಿಸಿ ನೌಕರರ ಮುಷ್ಕರಕ್ಕೆ ಬೆಂಬಲ ನೀಡಿಲ್ಲ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ವಸತಿ ಸಚಿವ ಸೋಮಣ್ಣ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಧರ್ಮಸ್ಥಳದಲ್ಲಿ ಮಾತನಾಡುತ್ತಾ, ಕಾರ್ಮಿಕ ಸಂಘಟನೆಗಳು ಮಾತುಕತೆ ನಡೆಸಿ ಪರಿಹರಿಸಲು ಸಿದ್ದವಿದೆ. ಆದರೆ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ತಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಕೊರೊನಾ ವೈರಸ್ ಹರಡುವ ಸಾಧ್ಯತೆಯಿರುವ ಈ ಕಷ್ಟದ ಸಂದರ್ಭದಲ್ಲಿ ಆಂದೋಲನ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.