Karavali
ಮಂಗಳೂರು: ಒಂದು ಯುಗದ ಅಂತ್ಯ - ಜ್ಯೋತಿ ಚಿತ್ರಮಂದಿರ ಇನ್ನು ನೆನಪು ಮಾತ್ರ
- Mon, Dec 07 2020 08:47:56 AM
-
Deekshith DV
ಮಂಗಳೂರು, ಡಿ.07 (DaijiworldNews/MB) : 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ನಗರದ ಪ್ರಸಿದ್ಧ ಹೆಗ್ಗುರುತುಗಳಲ್ಲಿ ಒಂದಾದ 'ಜ್ಯೋತಿ ಟಾಕೀಸ್' ಎಂದು ಜನಪ್ರಿಯವಾಗಿರುವ ಜ್ಯೋತಿ ಚಿತ್ರಮಂದಿರವನ್ನು ಲಾಕ್ಡೌನ್ ಪರಿಣಾಮವಾಗಿ ಶಾಶ್ವತವಾಗಿ ಮುಚ್ಚಲಾಗುತ್ತಿದೆ. ಈ ಚಿತ್ರಮಂದಿರವನ್ನು ಮುಚ್ಚುತ್ತಿರುವ ಸುದ್ದಿಯು ಚಿತ್ರ ಮಂದಿರದ ಕೊರತಯ ಸಮಸ್ಯೆಯಿಂದ ಬಳಲುತ್ತಿರುವ ತುಳುಚಿತ್ರರಂಗಕ್ಕೆ ಆಘಾತವನ್ನು ನೀಡಿದೆ. ತುಳುಚಿತ್ರಗಳ ಗೆಲುವಿನಲ್ಲಿ ಅಗಾಧವಾದ ಕೊಡುಗೆಯನ್ನು ನೀಡಿರುವ ಜ್ಯೋತಿ ಚಿತ್ರಮಂದಿರ ಇನ್ನು ನೆನಪು ಮಾತ್ರವಾಗಲಿದೆ. ಇನ್ನು ಈ ಚಿತ್ರಮಂದಿರ ಮುಚ್ಚುವ ಸುದ್ದಿ ತಿಳಿದ ಕೆಲವು ನಿರ್ಮಾಪಕರು ತುಳು ಚಿತ್ರ ನಿರ್ಮಾಣ ಮಾಡುವುದರಿಂದ ಹಿಂದೆ ಸರಿಯುತ್ತಿದ್ದಾರೆ. ಹಲವಾರು ತುಳು ಸಿನಿಮಾಗಳನ್ನು ತೆರೆಗೆ ತರುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಮೆಚ್ಚುಗೆ ಪಡೆದ ಚಿತ್ರಮಂದಿರವನ್ನು ಮುಚ್ಚಿದ ಸುದ್ದಿ ಅನೇಕ ಸಿನಿಮಾ ಪ್ರಿಯರನ್ನು, ವಿಶೇಷವಾಗಿ ತುಳು ಸಿನೆಮಾ ಪ್ರಿಯರನ್ನು ನಿರಾಶೆಗೊಳಿಸಿದೆ.
ಮೂಲಗಳ ಪ್ರಕಾರ, ಕರ್ನಾಟಕ ಥಿಯೇಟರ್ಸ್ ಯುನಿಟ್ ಲಿಮಿಟೆಡ್ ಮುಂಬೈ ಮೂಲದ ಬಿಲ್ಡರ್ ಜೊತೆ ವಾಣಿಜ್ಯ ಸಂಕೀರ್ಣವನ್ನು ಜಂಟಿ ಉದ್ಯಮವಾಗಿ ನಿರ್ಮಿಸಲು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವನ್ನು ಹಲವಾರು ವರ್ಷಗಳ ಹಿಂದೆ ಮಾಡಲಾಗಿತ್ತು. ಆದರೆ ತಾಂತ್ರಿಕ ತೊಂದರೆಗಳಿಂದಾಗಿ, ಇದುವರೆಗೂ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಿರಲಿಲ್ಲ.
ಈಗ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಥಿಯೇಟರ್ ಮುಚ್ಚಿರುವುದರಿಂದ, ಥಿಯೇಟರ್ ಅನ್ನು ಶಾಶ್ವತವಾಗಿ ಮುಚ್ಚಬಹುದು ಎಂದು ಅದು ಹೇಳಲಾಗಿದೆ. ವಾಣಿಜ್ಯ ಕಟ್ಟಡದ ನಿರ್ಮಾಣ ಕಾರ್ಯವು 2021 ರ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಮಂಗಳೂರಿಯನ್ನರು ಚಿತ್ರಮಂದಿರಕ್ಕೆ ವಿಶೇಷ ಸ್ಥಾನವನ್ನು ನೀಡುತ್ತಾರೆ. ವಾಸ್ತವವಾಗಿ, ನಗರದ ಹೃದಯಭಾಗದಲ್ಲಿರುವ ಈ ಪ್ರದೇಶವು (ಬಲ್ಮಠ) ಚಿತ್ರ ಮಂದಿರದ ಕಾರಣದಿಂದಾಗಿ 'ಜ್ಯೋತಿ' ಎಂಬ ಹೆಸರನ್ನು ಪಡೆಯಿತು. ರೋಮಾಂಚಕ ಬಂಟಿಂಗ್ಸ್ಗಳೊಂದಿಗೆ ಬೃಹತ್, ವರ್ಣರಂಜಿತ ಚಲನಚಿತ್ರ ಬೋರ್ಡ್ಗಳನ್ನು ಈ ಚಿತ್ರಮಂದಿರದ ಸುತ್ತಲೂ ಇರುವುದೇ ಎಲ್ಲರ ಗಮನವನ್ನು ಸೆಳೆಯುತ್ತವೆ. ವಿಶೇಷವಾಗಿ ವಾರಾಂತ್ಯದಲ್ಲಿ ಹೊಸ ಚಲನಚಿತ್ರ ಈ ಚಿತ್ರಮಂದಿರಲ್ಲಿ ಬಿಡುಗಡೆಯಾಗುತ್ತದೆ.
ಡಾ.ರಾಜ್ಕುಮಾರ್, ಡಾ.ವಿಷ್ಣುವರ್ಧನ್ ಮತ್ತು ಅಂಬರೀಶ್ ಇತರರು ಸೇರಿದಂತೆ ಹಲವಾರು ಸ್ಯಾಂಡಲ್ವುಡ್ ಚಿತ್ರ ತಾರೆಯರು ತಮ್ಮ ಚಲನಚಿತ್ರಗಳ ಬಿಡುಗಡೆಯ ಸಮಯದಲ್ಲಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು.
50 ವರ್ಷಗಳಿಗಿಂತ ಹೆಚ್ಚಿನ ಇತಿಹಾಸವಿರುವ ಈ ಚಿತ್ರಮಂದಿರ ಕೆಲವು ಮಲ್ಟಿಪ್ಲೆಕ್ಸ್ಗಳನ್ನು ಹೊರತುಪಡಿಸಿ ತುಳು ಚಲನಚಿತ್ರಗಳನ್ನು ಪ್ರದರ್ಶಿಸಿದ ಏಕೈಕ ಚಿತ್ರಮಂದಿರವಗಿದೆ. ಈ ಚಿತ್ರ ಮಂದಿರವು ವಾರಕ್ಕೊಮ್ಮೆ ತುಳು ಮತ್ತು ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸುವ ಕಾರಣದಿಂದಾಗಿ ಪ್ರಾದೇಶಿಕ ಚಿತ್ರಗಳ ಅಭಿಮಾನಿಗಳು ಜ್ಯೋತಿ ಟಾಕೀಸ್ಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅಷ್ಟೇ ಅಲ್ಲದೇ ತುಳು ಚಲನಚಿತ್ರಗಳ ನಿರ್ಮಾಪಕರು ಜ್ಯೋತಿ ಚಿತ್ರಮಂದಿರಕ್ಕೆ ಮೊದಲ ಆದ್ಯತೆ ನೀಡುತ್ತಾರೆ.
ಇತ್ತೀಚೆಗೆ ನಗರದ ಮತ್ತೊಂದು ಹೆಗ್ಗುರುತಾಗಿದ್ದ ಸೆಂಟ್ರಲ್ ಥಿಯೇಟರ್ ಅನ್ನು ಸ್ಥಗಿತಗೊಳಿಸಿದ ಕೆಲವೇ ದಿನಗಳಲ್ಲಿ ಈಗ ಜ್ಯೋತಿ ಟಾಕೀಸ್ ಕೂಡಾ ಮುಚ್ಚಲಾಗುತ್ತಿದೆ. ತುಳು ಚಿತ್ರೋದ್ಯಮದೊಂದಿಗೆ ಸಂಬಂಧ ಹೊಂದಿರುವವರಿಗೆ ಈ ಚಿತ್ರ ಮಂದಿರವನ್ನು ಮುಚ್ಚುವುದು ಒಂದು ಭಾವನಾತ್ಮಕ ಕ್ಷಣವಾಗಿ ಮಾರ್ಪಟ್ಟಿದೆ.
ಇನ್ನು ಈ ಬಗ್ಗೆ ದೈಜಿವರ್ಲ್ಡ್ ಜೊತೆ ಮಾತನಾಡಿದ ತುಳು ಚಲನಚಿತ್ರೋದ್ಯಮವನ್ನು ನಿಕಟವಾಗಿರುವ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, "ಜ್ಯೋತಿ ಚಿತ್ರಮಂದಿರವನ್ನು ಕಳೆದುಕೊಳ್ಳುವುದು ತುಳು ಚಲನಚಿತ್ರೋದ್ಯಮಕ್ಕೆ ದೊಡ್ಡ ನಷ್ಟವಾಗಿದೆ. ಉದ್ಯಮದ ಅನೇಕ ನಿರ್ಮಾಪಕರು ತಮ್ಮ ಚಲನಚಿತ್ರಗಳನ್ನು ಪ್ರದರ್ಶಿಸಲು ಜ್ಯೋತಿ ರಂಗಭೂಮಿಗೆ ಮೊದಲ ಆದ್ಯತೆ ನೀಡಿದ್ದರು ಎಂದು ಹೇಳಿದ್ದಾರೆ.
ಸುರತ್ಕಲ್ನಲ್ಲಿ ನಟರಾಜ್ ಚಿತ್ರಮಂದಿರವನ್ನು ಮುಚ್ಚುವುದು ಸಿನೆಮಾ ಪ್ರಿಯರನ್ನು ನಿರಾಶೆಗೊಳಿಸಿದೆ. ಈಗ ಅವಿಭಜಿತ ದಕ್ಷಿಣ ಕನ್ನಡದ ವಿವಿಧ ತಾಲೂಕುಗಳಲ್ಲಿನ ಅನೇಕ ಚಿತ್ರಮಂದಿರಗಳನ್ನು ಮುಚ್ಚುವ ಸುದ್ದಿಯು ಬಹಳ ವಿಷಾಧನೀಯ ಬೆಳವಣಿಗೆಯಾಗಿದೆ ಎಂದಿದ್ದಾರೆ.
ಈ ಬಗ್ಗೆ ದೈಜಿವರ್ಲ್ಡ್ ಜೊತೆ ಮಾತನಾಡಿದ ತುಳು ಚಲನಚಿತ್ರ ಮತ್ತು ರಂಗ ನಿರ್ದೇಶಕ ವಿಜಯ್ಕುಮಾರ್ ಕೊಡಿಯಾಲ್ಬೈಲ್, "ಜ್ಯೋತಿ ಥಿಯೇಟರ್ ಸ್ಥಗಿತಗೊಳ್ಳಲಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಆಡಳಿತ ಮಂಡಳಿ ಅದನ್ನು ನಿರಾಕರಿಸಿದೆ. ಜ್ಯೋತಿ ಥಿಯೇಟರ್ ಮುಚ್ಚುವುದು ನಿಜವಾಗಿಯೂ ನೋವುಂಟುಮಾಡುತ್ತದೆ. ಕೆಲವರು ಅದರ ಸ್ಥಳದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ಬರಲಿದೆ ಎಂದು ಹೇಳುತ್ತಾರೆ ಎಂದು ತಿಳಿಸಿದ್ದಾರೆ.
"ತುಳು ಚಲನಚಿತ್ರೋದ್ಯಮಕ್ಕೆ ಜ್ಯೋತಿ ಥಿಯೇಟರ್ 'ಹೆಡ್ ಆಫೀಸ್' ನಂತೆ. ನಾವು ಇಲ್ಲಿಂದ ಬಾಕ್ಸ್ ಆಫೀಸ್ ಸಂಗ್ರಹವನ್ನು ಪಡೆಯುತ್ತೇವೆ. ಜ್ಯೋತಿ ಥಿಯೇಟರ್ನಲ್ಲಿ ತುಳು ಚಲನಚಿತ್ರವನ್ನು ಪ್ರದರ್ಶಿಸುವುದು ಪ್ರತಿಯೊಬ್ಬ ನಿರ್ಮಾಪಕರ ಕನಸು. ಈ ಥಿಯೇಟರ್ ಲಭ್ಯವಿಲ್ಲದ ಕಾರಣ ಹಲವಾರು ಚಲನಚಿತ್ರಗಳು ಜನಪ್ರಿಯತೆಯನ್ನು ಗಳಿಸಲು ಸಾಧ್ಯವಾಗಲಿಲ್ಲ. ಮಲ್ಟಿಪ್ಲೆಕ್ಸ್ ನಿಜಕ್ಕೂ ಜ್ಯೋತಿ ಥಿಯೇಟರ್ನ ಸ್ಥಾನ ತುಂಬುವುದಾದರೆ ಅದು ಶೀಘ್ರದಲ್ಲೇ ಆಗಲಿ" ಎಂದು ಹೇಳಿದ್ದಾರೆ.
ಹಾಗೆಯೇ ದೈಜಿವರ್ಲ್ಡ್ಗೆ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ತುಳು ಮತ್ತು ಕನ್ನಡ ಚಲನಚಿತ್ರ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು, "ಜ್ಯೋತಿ ಚಿತ್ರಮಂದಿರವನ್ನು ಮುಚ್ಚುವುದು ನಿಜವಾಗಿಯೂ ನೋವಿನ ಸಂಗತಿಯಾಗಿದೆ. ಏಕ-ಪರದೆಯ ಚಿತ್ರಮಂದಿರಗಳನ್ನು ಮುಚ್ಚುವುದು ತುಳು ಚಲನಚಿತ್ರೋದ್ಯಮದ ಮೇಲೆ ಪರಿಣಾಮ ಬೀರುತ್ತಿದೆ. ಜ್ಯೋತಿ ಚಿತ್ರಮಂದಿರದಲ್ಲಿ ಹಲವಾರು ಚಲನಚಿತ್ರಗಳು ಪ್ರದರ್ಶನ ಕಂಡಿದ್ದು ಮುಖ್ಯವಾಗಿ ಈ ಚಿತ್ರಮಂದಿರ ತುಳು ಭಾಷೆಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಿದೆ. ಮಂಗಳೂರಿನ ಇತರ ಚಿತ್ರಮಂದಿರಗಳು ಕೂಡಾ ಜ್ಯೋತಿ ಚಿತ್ರಮಂದಿರದಂತೆ ತುಳು ಭಾಷೆಯ ಚಲನಚಿತ್ರಗಳನ್ನು ಬೆಂಬಲಿಸುತ್ತಿವೆ ಎಂದಿದ್ದಾರೆ.
"ಇದಲ್ಲದೆ, ಈ ಚಿತ್ರಮಂದಿರದೊಂದಿಗೆ ನನಗೆ ಭಾವನಾತ್ಮಕ ಬಾಂಧವ್ಯವಿದೆ. ಏಕೆಂದರೆ ನನ್ನ ಮೊದಲ ಚಲನಿಚಿತ್ರ ಚಾಲಿ ಪೋಲಿಲು ಇಲ್ಲಿ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ" ಎಂದು ನೆನಪಿಸಿಕೊಂಡರು.