ಪುತ್ತೂರು, ನ. 28 (DaijiworldNews/SM): ಗೋಹತ್ಯೆ ನಿಷೇಧ ಹಾಗೂ ಲವ್ ಜಿಹಾದ್ ತಡೆ ವಿಚಾರದಲ್ಲಿ ರಾಜ್ಯ ಸರಕಾರ ಸ್ಪಷ್ಟವಾಗಿದ್ದು, ಕೂಡಲೇ ಈ ಕುರಿತ ಕಾನೂನು ಜಾರಿಗೆ ಬರಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವಥ ನಾರಾಯಣ್ ಹೇಳಿದರು.
ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಗೋವು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಗೋವಿನ ಹತ್ಯೆಯನ್ನು ನಿಷೇಧಿಸುವ ಕಾನೂನಿನ ಜಾರಿ ಕುರಿತಂತೆ ಸರಕಾರ ಬದ್ಧವಾಗಿದ್ದು, ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರೂ ಈ ಕುರಿತು ತಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು.
ಅಲ್ಲದೆ ದೇಶದೆಲ್ಲೆಡೆ ಇದೀಗ ಚರ್ಚೆಯಲ್ಲಿರುವ ಲವ್ ಜಿಹಾದ್ ತಡೆ ಕಾನೂನು ವಿಚಾರವಾಗಿಯೂ ರಾಜ್ಯ ಸರಕಾರ ಬಹಳ ಸ್ಪಷ್ಟತೆಯನ್ನು ಹೊಂದಿದ್ದು, ಈ ಎರಡೂ ಕಾನೂನನ್ನು ಜಾರಿಗೆ ತರಲು ಸ್ವತಹ ಮುಖ್ಯಮಂತ್ರಿಗಳೇ ನಿರ್ಧರಿಸಿದ್ದಾರೆ ಎಂದ ಅವರು ಎರಡೂ ಕಾನೂನುಗಳು ರಾಜ್ಯದಲ್ಲಿ ಶೀಘ್ರವೇ ಜಾರಿಗೆ ಬರಲಿದೆ ಎಂದರು.