ಉಡುಪಿ, ನ. 08 (DaijiworldNews/SM): "ಹಿಂದೂಗಳ ಶ್ರಧ್ದಾಕೇಂದ್ರಗಳ ಮೇಲೆ, ನಮ್ಮ ಭಾವನೆಗಳ ಮೇಲೆ ಆಗುವ ಹಾನಿಯನ್ನು ಹಿಂದೂ ಸಮಾಜ ಎಂದಿಗೂ ಸಹಿಸುವುದಿಲ್ಲ. ನಾವು ನಂಬುವ ದೈವ ದೇವರುಗಳನ್ನು ಪ್ರಾರ್ಥಿಸಿದರೆ ನೀವುಗಳು ಪಾಕಿಸ್ತಾನಕ್ಕೆ ಹೋಗಬೇಕಾದ ದಿನ ಬರುತ್ತದೆ" ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.
ಪೆರ್ಡೂರಿನಲ್ಲಿ ನಡೆದ ಹಿಂದೂ ಹಿತರಕ್ಷಣಾ ಸಮಿತಿಯ ವತಿಯಿಂದ ನಡೆದ ಲವ್ ಜಿಹಾದ್ ವಿರುದ್ದದ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿಗಳು "ಪೆರ್ಡೂರುವಿನ ಘಟನೆ ನಡೆದ ಬೆನ್ನಿಗೆ ನಮ್ಮ ಕರ್ನಾಟಕದ ರಾಜ್ಯ ಸರಕಾರ ಲವ್ ಜಿಹಾದ್ ಅನ್ನು ನಿಷೇಧಿಸುವ ಕಾನೂನು ತರುವದಿಟ್ಟ ನಿರ್ಧಾರ ಮಾಡಿತು. ಇದಕ್ಕಾಗಿ ನಾವು ಸರಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಬೇಕು. ಇನ್ನು ಮುಂದೆ ನೀವು ಕಾನೂನಿನ ಕುಣಿಕೆಯಲ್ಲಿ ಬರುತ್ತೀರಿ. ಲವ್ ಜಿಹಾದ್ ಅನ್ನು ನಾವು ಮಟ್ಟ ಹಾಕಲೇ ಬೆಕು. ಹಲವಾರು ಪ್ರಕರಣಗಳಲ್ಲಿ ನಾವು ನಮ್ಮ ಹೆಣ್ಣು ಮಕ್ಕಳನ್ನು ಕಳೇದುಕಂಡಿದ್ದೇವೆ. ಎಲ್ಲದಕ್ಕೂ ಕಾನೂನು ಇದೆ ಎನ್ನುತ್ತೀರಿ ಆದರೆ ಕಾನೂನು ಎಂದಿಗೂ ಹಿಂದೂ ಸಮಾಜಕ್ಕೆ ಒಳ್ಳೆಯತನವನ್ನು ತೋರಿಸಿಲ್ಲ. ಈ ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲಲು ನಾವು ದೇವರ ಮೊರೆ ಹೋಗಲೇ ಬೇಕು.
ನಮ್ಮ ತಾಯಿಯ ಮೇಲೆ ಕೆಟ್ಟ ದೃಷ್ಟಿ ಬೀರುವವನ ದೃಷ್ಟಿ ಇಲ್ಲದ ಹಾಗೆ ಆಗಬೇಕು ಎಂದು ನಾವು ಪ್ರಾರ್ಥನೆ ಮಾಡಬೇಕು. ಹಿಂದೂಗಳ ಚಿಂತನಾ ಸಭೆಗಳಿಗೆ ವಿರೋಧ ಸಭೆ ಎಂದು ಹೇಳಿ ಅವಕಾಶ ನೀಡುತ್ತಿಲ್ಲ, ನಿಮ್ಮ ಮನೆಯ ಮಗಳು ಹೋದರೂ ಕೊನೆಗೆ ನಾವೇ ಹೋರಾಟ ಮಾಡಬೇಕು. ಹಿಂದೂ ಸಮಾಜ ಸೆಟೆದು ನಿಲ್ಲಬೇಕು. ಮುಂದಿನ ದಿನಗಳಲ್ಲಿ ದೇಶದಾದ್ಯಂತ ಎಲ್ಲಿಯಾದರೂ ಇಂತಹ ಪ್ರಕರಣಗಳು ನಡೆದರೆ ಅದರ ಮುಂದಿನ ಸ್ಥಿತಿ ಏನಾಗುತ್ತದೆ ಎಂದು ನೀವೆ ಊಹಿಸಿಕೊಳ್ಳಿ. ನಮಗೆ ಬೇಕಾದಷ್ಟು ಶಕ್ತಿ ಕೇಂದ್ರಗಳಿವೆ, ಆ ಎಲ್ಲಾ ಶಕ್ತಿ ಕೇಂದ್ರಗಳಿಗೆ ನಾವು ಮೊರೆ ಹೋದರೆ ನಿಮ್ಮ ಪರಿಸ್ಥಿತಿ ಪಾಕಿಸ್ತಾನಕ್ಕೇ ಹೋಗಬೇಕಾಗುತ್ತದೆ" ಎಂದರು.