ಕಾಸರಗೋಡು,ನ. 06 (DaijiworldNews/HR): ಸ್ಕೂಟರ್ ನಿಯಂತ್ರಣ ತಪ್ಪಿ 30 ಅಡಿ ಆಳದ ಹೊಂಡಕ್ಕೆ ಬಿದ್ದು ಮಹಿಳೆಯೊರ್ವರು ಮೃತಪಟ್ಟು, ಪುತ್ರಿ ಗಂಭೀರ ಗಾಯಗೊಂಡ ಘಟನೆ ಪೆರ್ಲದಲ್ಲಿ ನಡೆದಿದೆ.
ಮೃತಪಟ್ಟವರನ್ನು ಪೆರ್ಲ ಮಣಿಯಂಪಾರೆ ಸಂಕಿಲಮೂಲೆಯ ಸುಬೈದಾ ( 40) ಎಂದು ಗುರುತಿಲಾಗಿದೆ.
ಪುತ್ರಿ ಅನೀಸಾ( 17) ಗಾಯಗೊಂಡಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಸ್ಕೂಟರ್ ಸಮೀಪದ ರಬ್ಬರ್ ಎಸ್ಟೇಟ್ ಗೆ ಉರುಳಿ ಬಿದ್ದಿದೆ.