ಉಡುಪಿ, ನ.06 (DaijiworldNews/PY): ಉಡುಪಿ ಶ್ರೀ ಪಲಿಮಾರು ಮಠಕ್ಕೆ ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಸೌಹಾರ್ದಯುತ ಭೇಟಿ ನೀಡಿದರು.
800 ವರ್ಷಗಳ ಹಿಂದೆ ಆಚಾರ್ಯ ಮಾಧ್ವರಿಗೆ ಮಲ್ಪೆಯ ಕಡಲ ತೀರದಲ್ಲಿ ಗೋಪಿಚಂದನದೊಳಗೆ ಕಡೆಗೋಲು ಕೃಷ್ಣ ಸಿಕ್ಕಿದ್ದು, ಈ ದೃಷ್ಟಿಯಲ್ಲಿ ಸರ್ಕಾರದ ವತಿಯಿಂದ ಶ್ರೀ ಕೃಷ್ಣನ ಬೃಹತ್ ಮೂರ್ತಿ ಪ್ರತಿಷ್ಠಾಪಿಸಲು ಗುದ್ದಲಿ ಪೂಜೆ ಮಾಡಿ ಹಲವಾರು ವರ್ಷಗಳು ಕಳೆದರೂ ಯಾವುದೇ ಕಾಮಗಾರಿ ಆಗದಿರುವ ಬಗ್ಗೆ ಸಚಿವರ ಗಮನ ಸೆಳೆದರು.
ಈ ಕಾರ್ಯದ ಬಗ್ಗೆ ಅವಲೋಕಿಸಿ ಅದರಲ್ಲಿರುವ ಅಡಚಣೆಗಳನ್ನು ಸರಿಪಡಿಸಿ ಮೂರ್ತಿ ಪ್ರತಿಷ್ಠಾಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಪಲಿಮಾರು ಹಿರಿಯ, ಕಿರಿಯ ಮಠಾಧೀಶರು ಸಚಿವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಅನುಗ್ರಹಿಸಿದರು.
ಈ ಸಂದರ್ಭದಲ್ಲಿ, ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಮಠಾಧೀಶ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.