ಬೆಳ್ತಂಗಡಿ, ನ. 05 ( DaijiworldNews/HR): ಪ್ರವಾಹ ಪೀಡಿತ ಜನರ ಸಹಾಯಕ್ಕಾಗಿ ದಾನಿಗಳ ಬೆಂಬಲದೊಂದಿಗೆ ಸಹಾಯ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಕ್ಕಾಗಿ ಕನ್ನಡ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಮತ್ತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಶಾಸಕ ಹರೀಶ್ ಪೂಂಜ ಅವರನ್ನು ಶ್ಲಾಘಿಸಿದ್ದಾರೆ.
ಬೆಳ್ತಂಗಡಿ ಕಾಳಜಿ ಪ್ರವಾಹ ಪರಿಹಾರ ನಿಧಿಯಿಂದ ಸಂಗ್ರಹಿಸಿದ 2.74 ಕೋಟಿ ರೂ.ಗಳ ಚೆಕ್ ವಿತರಣಾ ಕಾರ್ಯಕ್ರಮ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಚೆಕ್ ಹಸ್ತಾಂತರಿಸಿದ ಬಳಿಕ ಮಾತನಾಡಿದ ಸಿ.ಟಿ.ರವಿ, ''ಸಮಾಜದ ಎಲ್ಲ ವರ್ಗಗಳನ್ನು ಒಗ್ಗೂಡಿಸಿ ಅವರಿಗೆ ಸಹಾಯ ಮಾಡಿದ ಶ್ರೇಯಸ್ಸಿಗೆ ಶಾಸಕರು ಅರ್ಹರು. ಈ ಬೆಳ್ತಂಗಡಿ ಕ್ಷೇತ್ರದಲ್ಲಿ ಡಾ.ವಿ.ವೀರೇಂದ್ರ ಹೆಗ್ಗಡೆ ಹಾಗೂ ಮಂಜುನಾಥೇಶ್ವರ ದೇವರ ಆಶೀರ್ವಾದವಿದೆ'' ಎಂದು ಹೇಳಿದರು.
ಬಳಿಕ ಮಾತನಾಡಿದ ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್, ಶಾಸಕರನ್ನು ಟೀಕಿಸುವ ಬದಲು ಅವರೊಂದಿಗೆ ರಾಜಕೀಯವಾಗಿ ಕೈಜೋಡಿಸುವಂತೆ ಜನರಿಗೆ ಕರೆ ನೀಡಿದ್ದು ಪ್ರವಾಹದಿಂದ ಬಳಲುತ್ತಿರುವ ಜನರ ರಕ್ಷಣೆಗೆ ಬಂದ ಹರೀಶ್ ಪೂಂಜಾ ಅವರನ್ನು ಶ್ಲಾಘಿಸಿದ್ದಾರೆ.
ಶಾಸಕ ಹರೀಶ್ ಪೂಂಜ ಮಾತನಾಡಿ, ''ಈ ಬಾರಿ ದೊಡ್ಡ ಮಟ್ಟದ ಪ್ರವಾಹದಿಂದ ಬೆಳ್ತಂಗಡಿ ತಾಲ್ಲೂಕಿಗೆ ಅನೇಕ ತೊಂದರೆ ಉಂಟಾಗಿದೆ. ಹಾಗಾಗಿ ಆ ಪ್ರದೇಶದ ಶಾಸಕರಾಗಿ ನಾನು ತೊಂದರೆಗೀಡಾದ ಪ್ರತಿಯೊಬ್ಬ ಕುಟುಂಬವನ್ನೂ ಭೇಟಿ ಮಾಡಿದ್ದೇನೆ. ಪ್ರವಾಹ ಪೀಡಿತ ಜನರಿಗೆ ಸಹಾಯ ಮಾಡಲು ನಿಧಿಯನ್ನು ಸ್ಥಾಪಿಸುವ ಬಗ್ಗೆ ಯೋಚಿಸಿದ್ದು ಅದಕ್ಕೆ ಉದ್ಯಮಿ ಶಶಿಧರ್ ಶೆಟ್ಟಿ, ಡಾ. ಹೆಗ್ಗಡೆ, ಡಾ.ಮೋಹನ್ ಆಳ್ವಾ, ಉದ್ಯಮಿ ಬಂಜಾರ ಪ್ರಕಾಶ್ ಶೆಟ್ಟಿ, ಹಲವಾರು ದಾನಿಗಳ ಮತ್ತು ಸಂಸ್ಥೆಗಳ ಬೆಂಬಲ ಸಿಕ್ಕಿತು. ಅರ್ಹರಿಗೆ ಪ್ರಾಮಾಣಿಕವಾಗಿ ಸಹಾಯವನ್ನು ಮಾಡುವ ನಿರ್ದಿಷ್ಟ ಉದ್ದೇಶದಿಂದ ಕಾಳಜಿ ಪರಿಹಾರ ನಿಧಿಯನ್ನು ಸ್ಥಾಪಿಸಲಾಗಿದೆ'' ಎಂದು ಹೇಳಿದರು.
ಇನ್ನು ಕಾಳಜಿ ರಿಲೀಫ್ ಫಂಡ್ ಹೆಸರಿನಲ್ಲಿ ಹಣವನ್ನು ನನಗಾಗಿ ಸಂಗ್ರಹಿಸಿದ್ದೇನೆ ಎಂದು ಕೆಲವರು ಆರೋಪಿಸುತ್ತಿದ್ದಾರೆ ಅದು ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತರಾಗುವುದಾಗಿ ಅವರು ಘೋಷಿಸಿದ್ದಾರೆ.
ಸಂತ್ರಸ್ತರ ಪರವಾಗಿ ಕೋಲಂಬೆ ಯಶೋದಾ ತಮ್ಮ ಭಾವನೆಗಳನ್ನು ಹಂಚಿಕೊಂಡರು, ಬಳಿಕ ಫಲಾನುಭವಿಗಳ ಪರವಾಗಿ ಪೂಂಜ ಅವರನ್ನು ಸನ್ಮಾನಿಸಲಾಯಿತು.
ಉಜಿರೆ ಜನಾರ್ಧನ ಸ್ವಾಮಿ ದೇವಾಲಯದ ಶರತ್ ಕೃಷ್ಣ, ಕಲಾಜಿ ಪರಿಹಾರ ನಿಧಿ ಸದಸ್ಯರು, ಡಾ.ಗೋಪಾಲಕೃಷ್ಣ, ಮೋಹನ್ ಕುಮಾರ್, ರಾಜೇಶ್ ಪೈ, ಲ್ಯಾನ್ಸಿ ಪಿಂಟೊ, ಡಾ.ಎಂ.ಎಂ.ಡಯಾಕರ್, ಪ್ರವೀಣ್, ಜಗದೀಶ್, ಅಬೂಬಕ್ಕರ್, ಗಣೇಶ ಗೌಡ ಮತ್ತು ಖಜಾಂಚಿ ನಂದಕುಮಾರ್ ಉಪಸ್ಥಿತರಿದ್ದರು.