ಮಂಗಳೂರು , ಅ. 17 (DaijiworldNews/HR): ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ದೊಡ್ಡದಾಗಿ ಬೆಳೆಯುತ್ತಿದ್ದು, ಎರಡು ಸಾವಿರಕ್ಕೆ ಮರಳು ಕೊಡುವುದಾಗಿ ಸಂಸದ ನಳೀನ್ ಕುಮಾರ್ ಕಟೀಲ್ ಭರವಸೆ ನೀಡಿ ಜನರಿಗೆ ಮೋಸ ಮಾಡಿದ್ದಾರೆ ಎಂದು ಮಾಜಿ ಶಾಸಕ ಮೊಯ್ದೀನ್ ಬಾವಾ ಹೇಳಿದ್ದಾರೆ.
ಈ ಕುರಿತು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಳೀನ್ ಕುಮಾರ್ ಕಟೀಲ್ ಅವರು ಎರಡು ಸಾವಿರಕ್ಕೆ ಮರಳು ಕೊಡುವುದಾಗಿ ಭರವಸೆ ನೀಡಿ ರಾಜಕೀಯ ನಾಯಕರು ತಲೆತಗ್ಗಿಸುವಂತೆ ಮಾಡಿದ್ದಾರೆ. ಬಿಜೆಪಿ ಶಾಸಕರು ನಾಟಕದ ಪಾತ್ರದಾರಿಗಳು ಎಂದರು.
ಇನ್ನು ಮರಳುಗಾರಿಕೆಗೆ ಅನುಮತಿ ಸಿಗದೇ ಬ್ಲಾಕ್ ಮಾರ್ಕೆಟ್ ನಲ್ಲಿ ಮಾರಾಟವಾಗುತ್ತಿದೆ. ಚುನಾವಣೆ ಬರುವಾಗ ಕೋಮು ವಿಚಾರದಲ್ಲಿ ಗಲಾಟೆ ಮಾಡುತ್ತಾರೆ ಮತ್ತು ಬಿಜೆಪಿಯವರಿಂದಾಗಿ ಬಡವರಿಗೆ ಮನೆ ಕಟ್ಟದ ಪರಿಸ್ಥಿತಿ ಎದುರಾಗಿದೆ. ನನ್ನ ವಿರುದ್ಧವಾಗಿ ಆರೋಪ ಮಾಡುವವರು ನನ್ನ ಎದುರು ಬರಲಿ, ನಾನು ಶಾಸಕನಾಗಿದ್ದಾಗ ಅಭಿವೃದ್ಧಿ ಕೆಲಸ ಮಾಡಿರುವುದು ಜನರಿಗೆ ಗೊತ್ತು ಎಂದು ಹೇಳಿದ್ದಾರೆ.