ಕಾಸರಗೋಡು,ಅ. 16 (DaijiworldNews/HR): 143 ಗ್ರಾಂ ಹಾಶಿಷ್ ಹಾಗೂ ಎರಡು ಕಿಲೋ ಗಾಂಜಾ ಸಹಿತ ಓರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದು , ಓರ್ವ ಪರಾರಿಯಾದ ಘಟನೆ ನಡೆದಿದೆ.
ಬಂಧಿತನನ್ನು ವರ್ಕಾಡಿ ಮೊರತ್ತಣೆ ಯ ಮುಹಮ್ಮದ್ ಅಸ್ಗರ್ ( 26) ಎಂದು ಗುರುತಿಸಲಾಗಿದೆ.
ಹೊಸಂಗಡಿಯ ಆಬಿದ್ ಎಂಬಾತ ಪರಾರಿಯಾಗಿದ್ದಾನೆ. ಮೊರತ್ತಣೆಯ ಕ್ವಾಟರ್ಸ್ ಸಮೀಪ ಶೆಡ್ ವೊಂದರಲ್ಲಿ ರಾತ್ರಿ ಸಮಯದಲ್ಲಿ ಯುವಕರು ಕಂಡುಬರುತ್ತಿರುವ ಬಗ್ಗೆ ಪೊಲೀಸರಿಗೆ ಲಭಿಸಿದ ಮಾಹಿತಿಯಂತೆ ದಾಳಿ ನಡೆಸಲಾಗಿದ್ದು, ಅಸ್ಗರ್ ನನ್ನು ವಶಕ್ಕೆ ತೆಗೆದುಕೊಂಡರೂ ಆಬಿದ್ ಪರಾರಿಯಾದನು.
ಆರೋಪಿಗಳಿಂದ ಹಾಶಿಷ್ ಹಾಗೂ ಗಾಂಜಾವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.